ಶಿವಳ್ಳಿ-ಹೆಬ್ಬಳ್ಳಿಯಲ್ಲಿ ಸೇವಾ ಸಿಂಧು ಡಿಜಿಟಲ್ ಕೇಂದ್ರಕ್ಕೆ ಚಾಲನೆ…

ಧಾರವಾಡ: ತಾಲೂಕಿನ ವಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟ್ ನವಲಗುಂದ ಹಾಗೂ ಕೇಂದ್ರ ಸರ್ಕಾರದ ಹಾಗೂ ಕರ್ನಾಟಕ ಸರ್ಕಾರದ 104 ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಒದಗಿಸಿ ಕೊಡುವ ಸೇವಾ ಸಿಂಧು ಡಿಜಿಟಲ್ ಸೇವಾ ಕೇಂದ್ರವನ್ನ ಆರಂಭಿಸಲಾಯಿತು.

ಶಿವಳ್ಳಿ ಗ್ರಾಮದಲ್ಲಿ ಕೇಂದ್ರದ ಉದ್ಘಾಟನೆಯನ್ನ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಾನಂದ ಲಂಬಿ ನೆರವೇರಿಸಿದರು. ಬಸಪ್ಪ ಮುಳ್ಳೂರು, ಶೇಖವ್ವ ಮಲ್ಲಿಗವಾಡ, ಸರೋಜಾ ಚಿಕ್ಕಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹೆಬ್ಬಳ್ಳಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಸ್ವಿನಿ ತಲವಾಯಿ ಕೇಂದ್ರವನ್ನ ಉದ್ಘಾಟಿಸಿದರು. ಬಸವರಾಜ್ ತಂಬಾಕದ, ಮಾಸಾಬಿ, ರೇಖಾ ನಿಂಗಪ್ಪಾ ಮೊರಬದ, ರಾಮಣ್ಣ ಹೊಂಗಲ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳು, ವಲಯ ಮೇಲ್ವಿಚಾರಕ ಮಲ್ಲಿಕಾರ್ಜುನ್, ಸೇವಾಪ್ರತಿನಿಧಿ ಲಲಿತಾ ಮೇಗುಂಡಿ, ತಯಮ್ಮ್, csc ಕೇಂದ್ರದ ಸಿಬ್ಬಂದಿ ಮಹೇಶ್ ಉಪಸ್ಥಿತರಿದ್ದರು.