ಮಳೆಯಲ್ಲೂ ಹೂಮಳೆ: ಜಗದೀಶ ಶೆಟ್ಟರಗೆ ಫೀದಾ ಆದ ಜನ
1 min readಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ನಿರಂತರವಾಗಿ ಸುರಿಯುತ್ತಿರುವ ಮಳೆಯಲ್ಲೂ ಕಾಮಗಾರಿ ವೀಕ್ಷಣೆಗೆ ಬಂದಾಗ, ಜನತೆ ಖುಷಿಯಿಂದ ಶೆಟ್ಟರವರಿಗೆ ಹೂಮಳೆ ಸುರಿಸುವ ಮೂಲಕ ಸ್ವಾಗತಿಸಿದರು.
ವಾರ್ಡ್ 47ರ ರಾಮನಗರದಲ್ಲಿ ಹದಗೆಟ್ಟ ರಸ್ತೆಗೆ ಪ್ಲೇವರ್ ಹಾಕಿಸುವ ಕಾಮಗಾರಿಯನ್ನ ವೀಕ್ಷಣೆ ಮಾಡಲು ಸ್ವತಃ ಜಗದೀಶ ಶೆಟ್ಟರ, ರಾಮನಗರಕ್ಕೆ ಬರುತ್ತಿರುವಂತೆ ಜನರು ಅವರ ಮೇಲೆ ಹೂ ಹಾಕಿ ಸಂತಸಪಟ್ಟರು.
ರಸ್ತೆಯುದ್ದಕ್ಕೂ ಸಂಚರಿಸಿದ ಜಗದೀಶ ಶೆಟ್ಟರ ಕಾಮಗಾರಿಯ ಬಗ್ಗೆ ಸಂತಸವ್ಯಕ್ತಪಡಿಸಿದರು. ಕೊರೋನಾ ಸಮಯದಲ್ಲೂ ಜನರ ಪರವಾಗಿ ಅಲೆದಾಡುತ್ತಿರುವ ಶೆಟ್ಟರ ಕಾರ್ಯವನ್ನ ಜನರು ಶ್ಲಾಘಿಸಿದರು.
ಮಹೇಂದ್ರ ಕೌತಾಳ, ರಾಮು ಯಾದಗಿರಿ, ಸೀಲ್ನ್ ಜೆವಿಯರ್, ಹನುಮಂತ ಚಲವಾದಿ, ಸುಖದೇವ್ ಕಾಂಬ್ಳೆ, ಬಸವಂತ ಗೌಡರ್, ರಾಜು ವಂದಾಲ್, ಯಮನಪ್ಪ ಕುದುರಿ. ಯಮನವ್ವ ವಂದಾಲ್, ಸ್ನೇಹಲತಾ ನಾಯ್ಡು, ಫಿಲೋಮಿನ ಹರಿಕೆ, ಅನುಸೂಯಾ ಮಡಿವಾಳ, ದೇವಿಕಾ ಚಲವಾದಿ, ಭುವನೇಶ್ವರಿ ಪಿಳೈ ಸೇರಿದಂತೆ 47ನೇ ವಾರ್ಡಿನಲ್ಲಿ ಬರುವ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.