ಶಶಿಕಾಂತ ಬಸಾಪುರ ಅವರೇ, ನೀವು ಸಂಬಳ ಪಡೆಯುವ ಶಾಲೆಗೋಗಲು ಏನು ಸಮಸ್ಯೆ…
1 min readಧಾರವಾಡ: ಶಿಕ್ಷಣ ಇಲಾಖೆಯಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದ್ದು, ಸರಕಾರದ ಸಂಬಳ ಪಡೆದು ತಾವು ವೇತನ ಪಡೆಯುವ ಶಾಲೆಯನ್ನೇ ಮರೆತಿರುವ ಪ್ರಕರಣವನ್ನ ಕರ್ನಾಟಕವಾಯ್ಸ್.ಕಾಂ ಹೊರ ಹಾಕುತ್ತಿದೆ.
ಧಾರವಾಡದ ನವಲೂರ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಶಶಿಕಾಂತ ಬಸಾಪುರ ಅವರನ್ನ ಅಧಿಕೃತ ಹುದ್ದೆಯಲ್ಲದ ಧಾರವಾಡ ಶಹರ ದೈಹಿಕ ಶಿಕ್ಷಣ ಪರಿವೀಕ್ಷಕ ಹುದ್ದೆಗೆ ನೇಮಕ ಮಾಡಲಾಗಿದೆ. ಇಲ್ಲಿದ್ದ ನೂರಾರೂ ವಿದ್ಯಾರ್ಥಿಗಳು ಹಲವು ವರ್ಷಗಳಿಂದ ದೈಹಿಕ ಶಿಕ್ಷಕರಿಲ್ಲದೇ ಇರುವ ಸ್ಥಿತಿ ನಿರ್ಮಾಣವಾಗಿತ್ತು.
ನವಲೂರ ಶಾಲೆಯಲ್ಲಿ ಒತ್ತಾಯ ಹೆಚ್ಚಿದ ನಂತರ ಹುಬ್ಬಳ್ಳಿ ನೇಕಾರನಗರ ಶಾಲೆಯ ಶಿಕ್ಷಕರನ್ನ ಇಲ್ಲಿಗೆ ವರ್ಗಾವಣೆ ಮಾಡಲಾಯಿತು. ನೇಕಾರನಗರದ ಶಾಲೆಯಲ್ಲಿದ್ದ ನೂರಾರೂ ಮಕ್ಕಳಿಗೆ ಇವತ್ತು ದೈಹಿಕ ಶಿಕ್ಷಕಯಿಲ್ಲ. ಇದು ವ್ಯವಸ್ಥೆ.
ಈಗ ಪಾಪ ಎನಿಸುವಷ್ಟು ಅಮಾಯಕರಂತೆ ಕಾಣುವ (ನಟಿಸುವ) ಡಿಡಿಪಿಐ ಎಸ್. ಎಸ್.ಕೆಳದಿಮಠ, ಬಸಾಪುರ ಅವರ ಡೆಪ್ಟೇಟೇಷನ್ ಕ್ಯಾನ್ಸಲ್ ಮಾಡುವಂತೆ ಆರ್ಡರ್ ಮಾಡಿಯೂ, ಕಳಿಸದೇ ಕೂತರು. ಅದನ್ನೇ ಬಂಡವಾಳ ಮಾಡಿಕೊಂಡ ಬಸಾಪುರ, ಈಗ ಹಾಲಿ ಶಾಸಕರ ಬೆಂಬಲವಿದೆ ಎನ್ನುತ್ತ (ಈ ಹಿಂದೆ ಮಾಜಿ ಶಾಸಕರ ಬೆಂಬಲವಿದೆ ಎನ್ನುತ್ತಿದ್ದರು) ದಿನಗಳನ್ನ ಕಳೆಯುತ್ತಿದ್ದಾರೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರಿಗೆ ಜಾಣ ಕುರುಡು ಆವರಿಸಿದೇಯಾ ಎಂಬ ಪ್ರಶ್ನೆ ಕೂಡಾ ಉದ್ಭವಿಸುತ್ತಿದೆ. ಏಕೆಂದರೆ, ಹದಗೆಟ್ಟಿರುವ ವ್ಯವಸ್ಥೆ ಕಾಣದಿರುವುದು ಸೋಜಿಗ ಮೂಡಿಸಿದೆ.