Posts Slider

Karnataka Voice

Latest Kannada News

ನನಸಾಗುವತ್ತ ರೈತರಿಗಾಗಿ ಕಂಡ ಕನಸು- ಆತ್ಮಸಂತೋಷಗೊಂಡ ಶಂಕರ ಪಾಟೀಲಮುನೇನಕೊಪ್ಪ

1 min read
Spread the love

ಧಾರವಾಡ: ರೈತರ ಬಹುದಿನದ ಕನಸಾಗಿದ್ದ ಬೆಣ್ಣೆಹಳ್ಳ ಮತ್ತು ತುಪ್ಪರಿಹಳ್ಳಗಳ ನೀರಾವರಿ ಯೋಜನೆಗೆ ಸಾಕಾರ ರೂಪ ದೊರೆಯುತ್ತಿದೆ. ತುಪರಿಹಳ್ಳದ ನೆರೆ ಪ್ರವಾಹದಿಂದ ಸಂತ್ರಸ್ಥರಾಗುತ್ತಿದ್ದ ಜನರ ಸ್ಥಿತಿಯನ್ನು ಹೋಗಲಾಡಿಸುವ ಪ್ರಯತ್ನಕ್ಕಿಂದು ಮುನ್ನುಡಿ ಬರೆಯಲಾಯಿತು. ನೀರಾವರಿ ಇಲಾಖೆಗೆ ತುಪರಿಹಳ್ಳವನ್ನು ಸೇರಿಸಿದ ನಂತರ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಉದ್ದೇಶದಿಂದ ಬೆಣ್ಣೆಹಳ್ಳ ಮತ್ತು ತುಪ್ಪರಿಹಳ್ಳಗಳ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆಗಳನ್ನು ಉತ್ತಮ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಾರ್ಯಕ್ರಮವನ್ನು ಇಂದು ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ಡ್ರೋಣ್ ತಂತ್ರಜ್ಞಾನದ ಮೂಲಕ ಸರ್ವೇಯನ್ನು ಪ್ರಾರಂಭಿಸಲಾಯಿತು.

ರೈತರ ಬಹುದಿನದ ಕನಸನ್ನು ನನಸು ಮಾಡಲು ಹೊರಟ ಈ ಕಾರ್ಯಕ್ರಮಕ್ಕೆ ನವಲಗುಂದ ಕ್ಷೇತ್ರದ ಶಿರೂರು ಗ್ರಾಮಕ್ಕೆ ಆಗಮಿಸಿದ್ದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ರವರ ಜೊತೆಗೂಡಿ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಚಾಲನೆ ನೀಡಿದರು.ಈ ಯೋಜನೆಯಿಂದ ರೈತ ಸಮುದಾಯದವರಿಗೆ ಕೃಷಿ ಚಟುವಟಿಕೆ ಹಾಗೂ ಸಾರ್ವಜನಿಕರ ಕುಡಿಯುವ ನೀರಿನ ಬವಣೆ ತಪ್ಪಲಿದೆ. ಅಲ್ಲದೇ ಪ್ರತಿವರ್ಷ ಬರುವ ನೆರೆ ಹಾವಳಿಯನ್ನೂ ತಪ್ಪಿಸಬಹುದಾಗಿದೆ. ಈ ಸಂದರ್ಭದಲ್ಲಿ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ರವರು, ಅನೇಕ ಮುಖಂಡರು, ರೈತರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed