“ಶಾಲಗಾರ ಜನಾಬ” ಇನ್ನಿಲ್ಲ: ನಗರದಲ್ಲಿಂದು ಅಂತ್ಯಕ್ರಿಯೆ
1 min readಬಾಗಲಕೋಟೆ: ಇಲ್ಲಿಯ ಉರ್ದು ಗಂಡು ಮಕ್ಕಳ ಶಾಲೆಯ ನಿವೃತ್ತ ಶಿಕ್ಷಕ ಅಲ್ಲಾಭಕ್ಷ್ಯ ಅಜೀ ಶಾಲಗಾರ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದು, ಅಪಾರ ಬಂಧು ಬಳಗವನ್ನ ಅಗಲಿದ್ದಾರೆ.
ನಗರದ ಬಹುತೇಕರಿಗೆ ಪರಿಚಿತರಾಗಿರುವ ಶಿಕ್ಷಕರ ಸಾವು, ಎಲ್ಲರಿಗೂ ಆಘಾತ ನೀಡಿದೆ.
ನಗರದ ಜನತೆ ಇವರನ್ನ ಪ್ರೀತಿಯಿಂದ ‘ಶಾಲಗಾರ ಜನಾಬ’ ಎಂದು ಗುರುತಿಸಿಕೊಂಡಿರುವ ಇವರ ನೂರಾರು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಕರಾಗಿದ್ದರು.
ಮೃತರ ಅಂತ್ಯಕ್ರಿಯೆ ಕೆಲವೇ ಸಮಯದಲ್ಲಿ ಬಾಗಲಕೋಟೆ ಬಿಲಾಲ್ ಮಸೀದಿಯ ಖಬರಸ್ತಾನದಲ್ಲಿ ನಡೆಯಲಿದೆ.