Posts Slider

Karnataka Voice

Latest Kannada News

ಸರಕಾರಿ ಶಾಲೆ ಶಿಕ್ಷಕನ ಪೈಶಾಚಿಕ ಕೃತ್ಯ.. ಪತ್ನಿ, ಮಕ್ಕಳು, ಪಾಲಕರನ್ನ ಅಮಾನೀಯವಾಗಿ ಥಳಿಸಿದ..!

Spread the love

ಹಲ್ಲೆಗೊಳಗಾದ ಶಿಕ್ಷಕನ ಪತ್ನಿಯ ಪೋಟೋ ಹಾಕುವ ಸ್ಥಿತಿಯಲ್ಲಿ ಇಲ್ಲಾ. ಹಾಗಾಗಿಯೇ ಅವರ ಪೋಟೋ ಹಾಕಲಾಗಿಲ್ಲ..!

ವಿಜಯಪುರ: ತನ್ನ ಸತಿಯ ಬಗ್ಗೆ ಅನುಮಾನದಿಂದ ಕಂಡ ಸರಕಾರಿ ಶಾಲೆಯ ಶಿಕ್ಷಕನೂ ಆಗಿರುವ ತಾಲೂಕು ಸರ್ಕಾರಿ ನೌಕರರ ಸಂಘದ ತಾಲೂಕು ಸಂಘದ ಉಪಾಧ್ಯಕ್ಷರಾಗಿರೋರ್ವರು ಪೈಶಾಚಿಕ ಕೃತ್ಯವನ್ನ ಎಸಗಿದ್ದು, ಇಡೀ ಕುಟುಂಬವೇ ಆಸ್ಪತ್ರೆ ಪಾಲಾದ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಸಂಭವಿಸಿದೆ.

ಕಡಕೋಳ ಗ್ರಾಮದಲ್ಲಿ ಸರ್ಕಾರಿ ಶಾಲಾ ಶಿಕ್ಷಕನಾಗಿ ಕಾರ್ಯನಿರ್ವಹಿಸುವ ಸಿದ್ರಾಮಪ್ಪ ದತ್ತಪ್ಪ ಮುಳಸಾವಳಗಿ ಎಂಬಾತನೇ  ಅನುಮಾನ ಪಟ್ಟು ಪತ್ನಿ ಸೇರಿದಂತೆ ಇಬ್ಬರು ಮಕ್ಕಳು ಹಾಗೂ ಹೆತ್ತವರ ಮೇಲೆಯೇ ಹಲ್ಲೆ ಮಾಡಿದ್ದಾನೆ.

ಪತ್ನಿ ರೇಣುಕಾಳ ಕೊಲೆಗೆ ಸಂಚು ರೂಪಿಸಿ, ಕಬ್ಬಿಣದ ಹಾರಿಯಿಂದ ಹೊಡೆದಿದ್ದಾನೆ. ಬಿಡಿಸಲು ಬಂದ ತಂದೆ, ತಾಯಿ ಹಾಗೂ 10 ವರ್ಷದ ಇಬ್ಬರು ಹೆಣ್ಮಕ್ಕಳ ಮೇಲೆಯೂ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಐವರನ್ನ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆರೋಪಿ ಶಿಕ್ಷಕ ಸಿದ್ರಾಮಪ್ಪ ಮುಳಸಾವಳಗಿ ದೇವರಹಿಪ್ಪರಗಿ ತಾಲೂಕಿನ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷನಾಗಿದ್ದು, ಬಸವನಬಾಗೇಬಾಡಿ ಠಾಣೆ ಪೊಲೀಸರು ಶಿಕ್ಷಕನನ್ನ ಬಂಧನ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *