Posts Slider

Karnataka Voice

Latest Kannada News

ನಾಳೆಯಿಂದ ವಿದ್ಯಾಗಮ, 6-9 ತರಗತಿ ಬೋಧನೆ ರದ್ದು…!

Spread the love

ಬೆಂಗಳೂರು: ಕೊರೋನಾ ಎರಡನೇಯ ಅಲೆಯ ಹಿನ್ನೆಲೆಯಲ್ಲಿ ನಾಳೆಯಿಂದಲೇ ವಿದ್ಯಾಗಮವೂ ಸೇರಿದಂತೆ ಆರಂಭಗೊಂಡಿದ್ದ 6ರಿಂದ 9ನೇ ತರಗತಿಯವರೆಗೆ ಭೌತಿಕ ಬೋಧನೆಯನ್ನ ಸ್ಥಗಿತಗೊಳಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಈಗಾಗಲೇ ಸಾಂಕ್ರಾಮಿಕ ರೋಗವೆಂದು ಘೋಷಿಸಿರುವ ಕೋವಿಡ್-19 ಸೋಂಕಿನ ಹರಡುವಿಕೆಯನ್ನ ತಡೆಗಟ್ಟುವಲ್ಲಿ ರಾಜ್ಯ ವಿಪತ್ತು ಪ್ರಾಧಿಕಾರ ರಾಜ್ಯದಲ್ಲಿ ಈ ಕ್ರಮವನ್ನ ಜರುಗಿಸಿದೆ.

10ನೇ ತರಗತಿಯಿಂದ 12ನೇ ತರಗತಿಗಳು ಮುಂದುವರೆಯಲಿದ್ದು, ಆದರೆ, ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗುವ ಕಡ್ಡಾಯವಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.

ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್ ಗಳ ತರಗತಿಯಲ್ಲಿ ಮಂಡಳಿಯ ಪರೀಕ್ಷೆ ಬರೆಯುವ ಹಾಗೂ ವೈಧ್ಯಕೀಯ ಶಿಕ್ಷಣದ ತರಗತಿಗಳನ್ನ ಜೊರತುಪಡಿಸಿ, ಇತರ ಎಲ್ಲ ತರಗತಿಗಳನ್ನ ರದ್ದುಗೊಳಿಸಲಾಗಿದೆ.


Spread the love

Leave a Reply

Your email address will not be published. Required fields are marked *