ಸರಕಾರಿ ಶಾಲೆ ಬೆಳೆಸಬೇಕು ಅನ್ನೋ ಕನಸಿದೇಯಾ.. ಹಾಗಾದ್ರೆ, ಇವರಿಗೊಂದು ಕಾಲ್ ಮಾಡಿ…!

ರಾಯಚೂರು: ಸರಕಾರಿ ಶಾಲೆಗಳ ಬಗ್ಗೆ ನಿಮಗೇನಾದರೂ ಸಹಾಯ ಮಾಡಬೇಕು ಅನ್ನೋ ಭಾವನೆ ಬಂದರೇ, ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ದಿಗ್ಗನಾಯಕನಭಾವಿ ಗ್ರಾಮದ ಶಾಲೆಯ ಶಿಕ್ಷಕರಿಗೊಂದು ಕಾಲ್ ಮಾಡಿ, ಅವರಿಗೆ ಬೇಕಾಗಿದ್ದನ್ನ ನೀಡಿದರೇ, ನೀವು ಸರಕಾರಿ ಶಾಲೆಯಲ್ಲಿ ಕಲಿತದ್ದಕ್ಕೂ ಸಾರ್ಥಕವಾಗುತ್ತದೆ.
ಇಲ್ಲಿನ ಶಿಕ್ಷಕ ಪರಮಾನಂದರ ಕನಸಿಗೆ ನೀವು ನೀರೆರೆದು ಪ್ರೋತ್ಸಾಹ ನೀಡಿದರೇ, ಇಲ್ಲಿನ ಮಕ್ಕಳಿಗೊಂದು ಚೆಂದದ ಬದುಕು ಸಿಗುವುದರಲ್ಲಿ ಅಚ್ಚರಿಯಿಲ್ಲ. ದಯವಿಟ್ಟು ಶಿಕ್ಷಕರ ಬೇಡಿಕೆಗೆ ಸ್ಪಂಧಿಸಿ, ನಿಮಗೊಂದು ಕರುಣೆಯಿರಲಿ..

ನಮ್ಮ ಶಾಲಾ ಗ್ರಂಥಾಲಯಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿದ : ಶಿಕ್ಷಕ ಪರಮಾನಂದ ಅವರು ಮನವಿ ಹೀಗಿದೆ..
ನಮ್ಮ ಶಾಲೆಯಲ್ಲಿ ಶ್ರಮಬಿಂದು ಗ್ರಂಥಾಲಯ ಎಂಬ ಹೆಸರಿನ ಒಂದು ಗ್ರಂಥಾಲಯ ಮಾಡಿದ್ದು ಇಲ್ಲಿ ಒಂದರಿಂದ ಪದವಿಯವರೆಗೆ ಮತ್ತು ಯುವಕರು ಹಿರಿಯರು ಹಾಗೂ CET ಓದುವ ಮಕ್ಕಳೂ ಓದಬಹುದು ನಮ್ಮೂರಿನಲ್ಲಿ ಓದುವ ಮನಸ್ಸುಗಳಿಗೆ ಪುಸ್ತಕ ಒದಗಿಸುವ ಗುರಿ ನಮ್ಮದಾಗಿದೆ ಎಂದು ಶಿಕ್ಷಕ ಪರಮಾನಂದ ಹೇಳಿದರು. ತಾವುಗಳು ಮತ್ತು ತಮ್ಮ ಮಕ್ಕಳು ಓದಿದ ಕಥೆ ಕವನ ಇತ್ಯಾದಿ ಪುಸ್ತಕಗಳನ್ನು ಹಾಗೂ
ತಮ್ಮ ಮಕ್ಕಳು ನೌಕರಿ ಅಥವಾ ಮುಂದಿನ ತರಗತಿಗೆ ಹೋದ ನಂತರ ಉಳಿದ ಹಳೆಯ ಪುಸ್ತಕಗಳನ್ನು ನಮಗೆ ನೀಡಬಹುದು. ಯಾರಾದರೂ ಪುಸ್ತಕ ಬರೆದಿದ್ದರೆ ತಮ್ಮ ಒಂದೆರಡು ಪುಸ್ತಕಗಳನ್ನು ನಮಗೆ ಕೊಡುಗೆಯಾಗಿ ನೀಡಬಹುದು.
ಮಕ್ಕಳ ಭವಿಷ್ಯದ ದೃಷ್ಠಿಯಿಂದ ನಮ್ಮ ಶಾಲೆಗಾಗಿ ಯಾರಾದರೂ ಪುಸ್ತಕಗಳನ್ನು ನೀಡಲು ಬಯಸಿದವರು ಪುಸ್ತಕಗಳನ್ನು ಖರೀದಿಸಿ ನಮ್ಮ ಶಾಲಾ ವಿಳಾಸಕ್ಕೆ ಕಳುಹಿಸಬಹುದು. ಶಾಲಾ ಅವಧಿಯಲ್ಲಿ ನಾವುಗಳು ಪ್ರತಿದಿನ ಪುಸ್ತಕ ಪರಿಚಯ ಕಾರ್ಯಕ್ರಮ ಮಾಡುತ್ತಿದ್ದು, ಪುಸ್ತಕಗಳನ್ನು ನೀಡಿದ ತಮ್ಮ ಹೆಸರಿನೊಂದಿಗೆ ಪುಸ್ತಕದ ಪರಿಚಯ ಮಾಡುತ್ತೇವೆ ಎಂದು ಶಿಕ್ಷಕರು ಮನವಿ ಮಾಡಿಕೊಂಡು ಆಸಕ್ತಿಯಿರುವ ಪುಸ್ತಕ ದಾನಿಗಳು ಮುಂದೆ ಬಂದು ಮಕ್ಕಳ ಭವಿಷ್ಯ ರೂಪಿಸಲು ಸಹಕರಿಸಬಹುದು.
ಶಾಲಾ ವಿಳಾಸ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದಿಗ್ಗನಾಯಕನಭಾವಿ
ಪೋ|| ಮಾರಲದಿನ್ನಿ
ತಾ|| ಮಸ್ಕಿ
ಜಿ|| ರಾಯಚೂರು
Pin -584122
ದೂ 9900704973