Posts Slider

Karnataka Voice

Latest Kannada News

SBI ಬ್ಯಾಂಕ್ ಮ್ಯಾನೇಜರ್‌ಗೆ ನಡು ಬೀದಿಯಲ್ಲೇ ಚಾಕು ಇರಿತ…

Spread the love

ಡಿಸಿ ಕಚೇರಿಗೆ ಹೋಗುವ ರಸ್ತೆಯಲ್ಲಿ ಘಟನೆ

ಬೈಕಿನಲ್ಲಿ ಬಂದವರಿಂದ ದುಷ್ಕೃತ್ಯ

ಹಾವೇರಿ: ಕೊಲೆ ಮಾಡುವ ಉದ್ದೇಶದಿಂದ ಎಸ್‌ಬಿಐ ಬ್ಯಾಂಕಿನ ಮ್ಯಾನೇಜರ್ ಮೇಲೆ ಆಗುಂತಕರು ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಹಾವೇರಿಯ ಡಿಸಿ ಆಫೀಸ್‌ಗೆ ಹೋಗುವ ರಸ್ತೆಯಲ್ಲಿ ನಡೆದಿದೆ.

58 ವಯಸ್ಸಿನ ಮ್ಯಾನೇಜರ್ ಜಯರಾಮ್ ಕೊಲ್ಲಾಪೂರ ಎಂಬುವವರ ಮೇಲೆ ಎರಡು ಬೈಕಿನಲ್ಲಿ ಬಂದ ನಾಲ್ಕರು ಚಾಕು ಇರಿದು ಪರಾರಿಯಾಗಿದ್ದಾರೆ.

ಎಕ್ಸಕ್ಲೂಸಿವ್ ವೀಡಿಯೋ…

 

ಡಿಸಿ ಆಪೀಸಗೆ ತೆರಳಿದ್ದ ಮ್ಯಾನೇಜರ ಮಗನ ಜೊತೆ ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿ ಚಾಕುವಿನಿಂದ ಮೂರು ಬಾರಿ ಇರಿದು ಕೊಲೆಗೆ ಪ್ರಯತ್ನಿಸಲಾಗಿದೆ.

ಗಾಯಗೊಂಡ ಜಯರಾಮ್ ಅವರನ್ನ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಹುಬ್ಬಳ್ಳಿಯ ಕಿಮ್ಸ್ ರವಾನೆ ಮಾಡಲಾಗಿದೆ.

ಹಾವೇರಿ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


Spread the love

Leave a Reply

Your email address will not be published. Required fields are marked *