Posts Slider

Karnataka Voice

Latest Kannada News

ಸವದತ್ತಿ-ಯಲ್ಲಮ್ಮನ ಗುಡ್ಡಕ್ಕ್ ಹೊಂಟೀರಿ- ಹಂಗಂದ್ರ ‘ಆ’ ದಾರಿ ಹಿಡಿಬ್ಯಾಡ್ರೀ- 100% ಮುಟ್ಟಂಗಿಲ್ಲಾ..!

1 min read
Spread the love

ಧಾರವಾಡ: ಶ್ರೀ ಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ನೀವೂ ಧಾರವಾಡದ ಮೂಲಕ ಹೊರಟಿದ್ದರೇ ಯಾವುದೇ ಕಾರಣಕ್ಕೂ ಈ ರಸ್ತೆಯ ಮೂಲಕ ಹೋಗಲೇಬೇಡಿ. ಯಾಕಂದ್ರೇ, ಸಾಕಷ್ಟು ಕಷ್ಟ ಅನುಭವಿಸಬೇಕಾಗತ್ತೆ.
ಬೆಳಗಾವಿಯೂ ಸೇರಿದಂತೆ ಕಿತ್ತೂರು ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಾರೋಬೆಳವಡಿ ಗ್ರಾಮದ ಬಳಿ ರಸ್ತೆ ಬಂದಾಗಿದೆ. ಕಳೆದ ಬಾರಿ ಮಳೆಗೆ ರಸ್ತೆ ಕೊಚ್ಚಿಕೊಂಡು ಹೋಗಿದ್ದರಿಂದ ಪಕ್ಕದಲ್ಲಿ ರಸ್ತೆ ಮಾಡಲಾಗಿತ್ತು. ಹಳ್ಳ ಬಂದಿರುವುದರಿಂದ ಆ ರಸ್ತೆಯು ಬಂದಾಗಿದೆ.
ಇದೇ ಕಾರಣಕ್ಕೆ ನೀವೂ ಶ್ರೀ ಕ್ಷೇತ್ರ ಯಲ್ಲಮ್ಮನ ದರ್ಶನ ಪಡೆಯಲು ಅಲ್ಲಿಗೆ ಹೋಗಬೇಕಾದರೇ ಬೇರೆ ಮಾರ್ಗದ ಮೂಲಕ ತೆರಳಿ. ನೀವೂ ಧಾರವಾಡದ ಮೂಲಕ ಉಪ್ಪಿನಬೆಟಗೇರಿಗೆ ಹೋಗಿ ಆ ಮೂಲಕವೂ ಹೋಗಬಹುದಾಗಿದೆ. ಯಾವುದಕ್ಕೂ ಮಾಹಿತಿ ಪಡೆಯದೇ ಪ್ರಯಾಣಿಸಬೇಡಿ.


Spread the love

Leave a Reply

Your email address will not be published. Required fields are marked *