Posts Slider

Karnataka Voice

Latest Kannada News

ಲಾಡ್ ಸಾಹೇಬ್ರೇ, ನೀವೂ ಭೇಟಿಕೊಟ್ಟು ವರ್ಷ ಕಳೆದರೂ “ಛತ್ರಿಯಡಿ” ನಡಿಯುತ್ತಿದೆ ವಿದ್ಯಾಭ್ಯಾಸ… ಕಣ್ತರೆದು ನೋಡಿ…

1 min read
Spread the love

ಧಾರವಾಡ: ಸಂತೋಷ ಲಾಡ ಅವರು ರಾಜ್ಯಕ್ಕೆ ಮಂತ್ರಿಯಾಗಿ ಧಾರವಾಡ ಜಿಲ್ಲೆಗೆ ಉಸ್ತುವಾರಿಯಾಗಿ ಸರಕಾರಿ ಪದವಿ ಕಾಲೇಜಿಗೆ ಭೇಟಿ ನೀಡಿ ಬರೋಬ್ಬರಿ ವರ್ಷ ಮೀರಿದೆ. ಆದರೆ, ಸಮಸ್ಯೆ ಮಾತ್ರ ಮೊದಲಿಗಿಂತಲೂ ಮತ್ತಷ್ಟು ಹದಗೆಟ್ಟಿದೆ.

ಹೌದು… ಧಾರವಾಡದ ಆರ್.ಎನ್.ಶೆಟ್ಟಿ ಮೈದಾನದ ಬಳಿಯಿರುವ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಸೋರುವ ಕಟ್ಟಡದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಓದುವ ಸ್ಥಿತಿ ನಿರ್ಮಾಣವಾಗಿದೆ.

ವೀಡಿಯೋ ಇಲ್ಲಿದೆ ನೋಡಿ…

ಸರಕಾರಿ ಶಾಲೆಯಲ್ಲಿ ಕಲಿಯಲು ಬರುತ್ತಿರುವುದು ಗ್ರಾಮೀಣ ಪ್ರದೇಶದ ಬಡವರ ಮಕ್ಕಳು. ಕೇವಲ ತೋರಿಕೆಗಾಗಿ ಹೇಳಿಕೆ ಕೊಡುವುದು ಮತ್ತೂ ಮರೆತು ಬಿಡುವುದನ್ನ ಅಧಿಕಾರಿಗಳು ಬಿಡಬೇಕಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸರಕಾರದಿಂದ ಏನು ಮಾಡಲಾಗದ ಸ್ಥಿತಿಯಿದ್ದರೇ, ಫೌಂಡೇಷನ್‌ ಮೂಲಕವಾದರೂ ಈ ಪದವಿ ಕಾಲೇಜ್‌ನ್ನ ಉಳಿಸಲು ಮುಂದಾಗಬೇಕಿದೆ.


Spread the love

Leave a Reply

Your email address will not be published. Required fields are marked *