Posts Slider

Karnataka Voice

Latest Kannada News

ಕಲಘಟಗಿ ವಿದ್ಯಾರ್ಥಿನಿ ಕಂಡ “ಕನಸು ನನಸು” ಮಾಡಲು ಹೊರಟ ಮಾಜಿ ಸಚಿವ ಸಂತೋಷ ಲಾಡ…!

1 min read
Spread the love

ಕಲಘಟಗಿ: ಆಕೆ ಗ್ರಾಮೀಣ ಭಾಗದ ಪ್ರತಿಭೆ. ಕನಸು ಕಂಡರೇ ದೊಡ್ಡದ್ದನ್ನೇ ಕಾಣಬೇಕೆಂದುಕೊಂಡವಳು. ಅದೇ ಕಾರಣಕ್ಕೆ ತಾನೂ ಐಎಎಸ್ ಮಾಡಬೇಕೆಂದುಕೊಂಡಳು. ಆದರೆ, ಆಕಾಶಕ್ಕೆ ಏಣಿ ಹಚ್ಚಲು ಆಗುತ್ತದೆ ಎಂದುಕೊಂಡಾಗಲೇ ವಿದ್ಯಾರ್ಥಿನಿಗೆ ನೆನಪಾಗಿದ್ದು, ಸಂತೋಷ ಲಾಡ ಎಂಬ ಶಿಕ್ಷಣ ಪ್ರೇಮಿ.

ಹೌದು.. ಕಲಘಟಗಿ ತಾಲೂಕಿನ ತಾವರಗೆರೆ ಗ್ರಾಮದಲ್ಲಿದ್ದುಕೊಂಡು ಬಿಕಾಂನಲ್ಲಿ 96% ಅಂಕ ಪಡೆದಿರುವ ಶ್ರೀದೇವಿ ದ್ಯಾವಪ್ಪನವರ ಎಂಬ ವಿದ್ಯಾರ್ಥಿನಿಗೆ ಐಎಎಸ್ ಅಧಿಕಾರಿಯಾಗುವ ಕನಸು. ಅದೇ ಕಾರಣಕ್ಕೆ ತನಗೆ ಸಹಾಯ ಮಾಡುವಂತೆ ಹೇಳಿದ ಕೆಲವೇ ಸಮಯದಲ್ಲಿ ಆಕೆಯ ಮನೆಗೆ ಮಾಜಿ ಸಚಿವ ಸಂತೋಷ ಲಾಡ, 40 ಸಾವಿರ ರೂಪಾಯಿಯ ಡಿಡಿಯನ್ನ ಕೊಟ್ಟು ಕಳಿಸಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ಹುಡುಗರಿಗೆ ಸಿಗುವ ಪ್ರೋತ್ಸಾಹ ಹುಡುಗಿಯರಿಗೂ ಸಿಗಬೇಕು. ಪ್ರತಿಯೊಬ್ಬರು ಶಿಕ್ಷಣವನ್ನ ಪಡೆಯಬೇಕು. ತಮಗಿಷ್ಟವಾದ ಮಾರ್ಗದಲ್ಲಿ ಮುನ್ನಡೆಯಬೇಕೆಂದು ಬಯಸುವ ಸಂತೋಷ ಲಾಡ, ಅವರು ನೀಡಿದ ಡಿಡಿಯನ್ನ ವಿದ್ಯಾರ್ಥಿನಿಯ ಕುಟುಂಬಕ್ಕೆ ತಲುಪಿಸಲಾಗಿದೆ.

ವಿದ್ಯಾರ್ಥಿನಿಯ ಕುಟುಂಬಕ್ಕೆ ತಲುಪಿಸಿದ ವೇಳೆಯಲ್ಲಿ ಕೆಪಿಸಿಸಿ ಸದಸ್ಯ ಎಸ್.ಆರ್.ಪಾಟೀಲ, ಲಾಡ ಅವರ ಆಪ್ತ ಸಹಾಯಕ ಹರಿಶಂಕರ, ಬಾಳು ಖಾನಾಪುರ, ರಾಮನಗೌಡ ಪಾಟೀಲ, ಕಲ್ಲಪ್ಪ ಗುಡಿಹಾಳ, ಫಕ್ಕೀರಪ್ಪ ಕಾಮಧೇನು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಶ್ರೀದೇವಿಯ ಜೀವನ ಮುಂದಿನ ದಿನದಲ್ಲಿ ಉತ್ತಮವಾಗಿ ಕಲಘಟಗಿಯ ಹೆಸರು ಬರುವಂತಾಗಲಿ ಎಂದು ಪ್ರಮುಖರು ಆಶೀರ್ವದಿಸಿದರು.


Spread the love

Leave a Reply

Your email address will not be published. Required fields are marked *