ಸೈಕಲೇರಿ “ಕೇಂದ್ರದ ನೀತಿ ಖಂಡಿಸಿದ” ಕಲಘಟಗಿಯ ಸುಪುತ್ರ…!

ಕಲಘಟಗಿ: ತೈಲ ಬೆಲೆ ಏರಿಕೆಯನ್ನ ಖಂಡಿಸಿ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಸಂತೋಷ ಲಾಡ ವಿನೂತನವಾಗಿ ಪ್ರತಿಭಟನೆ ನಡೆಸಿದ್ದು, ಸೈಕಲ್ ಗೆ ಬೈಕ್ ಕಟ್ಟಿ ಸೈಕಲ್ ಚಲಾಯಿಸಿದರು.
ಕೇಂದ್ರ ಸರಕಾರದ ನೀತಿಯಿಂದ ಪೆಟ್ರೋಲ್ ನೂರರ ಗಡಿ ದಾಟಿದೆ. ಸಾಮಾನ್ಯ ಜನರ ಬದುಕು ಮತ್ತಷ್ಟು ದುರ್ಭರವಾಗುತ್ತಿದೆ ಎಂಬ ಕಾರಣಕ್ಕೆ ಕುಹಕವಾಡುವ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ಮಾತನಾಡಿದ ಮಾಜಿ ಸಚಿವ ಸಂತೋಷ ಲಾಡ, ಜನರ ಒಳಿತನ್ನ ಸರಕಾರಗಳು ಬಯಸಬೇಕೆ ಹೊರತು, ಬೇರೆಯನ್ನಲ್ಲ. ತೈಲ ಬೆಲೆ ಏರಿಕೆ ಮಾಡಿ, ಏನೂ ಸಾಧನೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಕಲಘಟಗಿಯ ಕಾಂಗ್ರೆಸ್ ಮುಖಂಡರುಗಳಾದ ಎಸ್.ಆರ್.ಪಾಟೀಲ, ಮಂಜುನಾಥ ಮುರಳ್ಳಿ ಸೇರಿದಂತೆ ಹಲವರು ಭಾಗವಹಿಸಿ, ಕೇಂದ್ರದ ನೀತಿಯನ್ನ ಖಂಡಿಸಿದರು.