ಸಣ್ಣ ವಯಸ್ಸಿನಲ್ಲಿ ರಾಜಕಾರಣ ಮಾಡ್ತಿದ್ದೀನಿ- ರೋಡಲ್ಲಿ ನಿಲ್ಲಿಸೋ ಸಂಸ್ಕೃತಿ ಬೇಡಾ- ಸಂತೋಷ ಲಾಡ ಕೊಟ್ಟ ಎಚ್ಚರಿಕೆ ಏನು…!?

ಧಾರವಾಡ: ನಾನು ಸಣ್ಣ ವಯಸ್ಸಿನಲ್ಲಿ ನಾನು ರಾಜಕೀಯ ಮಾಡುತ್ತ ಬಂದಿದ್ದೇನೆ. ನನಗೆ ಎಲ್ಲವೂ ಗೊತ್ತು. ನಾವು ನೀವೂ ಗೆಳೆಯರಾಗಿದ್ವಿ. ಹಾಗೇ ಇರೋಣ. ಅದನ್ನ ಬಿಟ್ಟು ಇಂತಹ ಕ್ಷುಲಕ ರಾಜಕಾರಣ ಮಾಡುವುದು ಬೇಡವೆಂದು ಮಾಜಿ ಸಚಿವ ಸಂತೋಷ ಲಾಡ ಹೇಳಿದರು.
ಮುಗದ ಗ್ರಾಮದಲ್ಲಿ ಅಕ್ಕಿ ಹಂಚಲು ಬಂದ ಸಮಯದಲ್ಲಿ ಕೆಲವರು ಸಂತೋಷ ಲಾಡ ಅವರ ವಿರುದ್ಧ ಮಾತನಾಡುವ ಮೂಲಕ, ಪರಿಸ್ಥಿತಿಯ ಲಾಭ ಪಡೆಯಲು ಮುಂದಾದ ಸಮಯದಲ್ಲಿ ಸಂತೋಷ ಲಾಡ ಹೇಳಿದ್ದೇನು.. ನೀವೇ ಕೇಳಿ..
ಸಂತೋಷ ಲಾಡ ಅವರು ಬಂದಿದ್ದರ ಬಗ್ಗೆ ಸ್ಥಳೀಯರು ಯಾವುದೇ ಆಕ್ಷೇಪ ವ್ಯಕ್ತಪಡಿಸದಿದ್ದರೂ, ಕೆಲವರು ಬೇರೆ ಊರಿನಿಂದ ಜನರನ್ನ ಕರೆಸಿ, ತಗಾದೆ ತೆಗೆಸುವ ಪ್ರಯತ್ನ ಮಾಡಿದ್ದಕ್ಕೆ, ಕ್ಷೇತ್ರದ ವ್ಯಕ್ತಿಯೊಬ್ಬರು ಚೆನ್ನಾಗಿಯೇ ಮಾತನಾಡಿದ್ದಾರೆ.