Posts Slider

Karnataka Voice

Latest Kannada News

“ನಾಳೆ” ಧಾರವಾಡದಲ್ಲಿ ಸಚಿವ ಸಂತೋಷ ಲಾಡ “ಜನತಾ ದರ್ಶನ”…

1 min read
Spread the love

ಧಾರವಾಡ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಹಲವು ಯೋಜನೆಗಳು ಜನರ ಬಳಿ ತಲುಪುತ್ತಿದ್ದು, ಇದೇ ಸಮಯದಲ್ಲಿ ಜನತಾ ದರ್ಶನ ಮಾಡಲು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ತೀರ್ಮಾನಿಸಿದ್ದಾರೆ.

ನಾಳೆ ಬೆಳಿಗ್ಗೆ 11 ಗಂಟೆಯಿಂದ ಕೆಸಿಡಿ ಬಳಿಯಿರುವ ಸೃಜನಾ ರಂಗಮಂದಿರದಲ್ಲಿ ಸಚಿವ ಸಂತೋಷ ಲಾಡ ಅವರು ಜನತಾ ದರ್ಶನ ನಡೆಸಿ, ಸ್ಥಳದಲ್ಲಿ ಹಲವು ಸಮಸ್ಯೆಗಳನ್ನು ಈಡೇರಿಸಲು ಮುಂದಾಗಿದ್ದಾರೆ.

ಸಾರ್ವಜನಿಕರ ಸೇವೆಗಾಗಿ ತಮ್ಮನ್ನ ಮೀಸಲಿಟ್ಟುಕೊಂಡಿರುವ ಸಚಿವ ಸಂತೋಷ ಲಾಡ, ಪ್ರತಿಯೊಬ್ಬರ ತೊಂದರೆಗಳನ್ನ ನಿವಾರಿಸಲು ಕ್ರಮ ಜರುಗಿಸಲು ಸೂಚನೆ ನೀಡುವ ಉದ್ದೇಶ ಹೊಂದಿದ್ದಾರೆ.

ಸಾರ್ವಜನಿಕರು ಕೂಡಾ ತೀರಾ ವಯಕ್ತಿಕವಾದ ಸಮಸ್ಯೆಗಳನ್ನ ಜನತಾ ದರ್ಶನದಲ್ಲಿ ತಂದು, ವ್ಯತಾ ಸಮಯವನ್ನ ಹಾಳು ಮಾಡುವುದನ್ನ ಬಿಡಬೇಕೆಂಬುದನ್ನ ಅರಿತುಕೊಳ್ಳುವ ಅವಶ್ಯಕತೆಯಿದೆ.


Spread the love

Leave a Reply

Your email address will not be published. Required fields are marked *