“ಕರಣ ಲಾಡ್” ಸಂತೋಷಕ್ಕೆ ಸಾಹಿತ್ಯ ಸಿಂಚನ…

ಅಪ್ಪ ಪ್ರಭಾವಿ ಸಚಿವ, ಸಿರಿವಂತ ಕುಟುಂಬ, ಬೇಕೆನಿಸಿದ್ದೆಲ್ಲವೂ ಪಡೆದುಕೊಳ್ಳಬಹುದಾದಷ್ಟು ಶ್ರೀಮಂತಿಕೆ!
ಕರಣ್ ಲಾಡ್ ಮನಸ್ಸು ಮಾಡಿದ್ರೆ ಐಶಾರಾಮಿಯಾಗಿ ಮೋಜು ಮಸ್ತಿ ಮಾಡುತ್ತ ಲೈಫ್ ಎಂಜಾಯ್ ಮಾಡಬಹುದಿತ್ತು! ಆದರೆ ಕರಣ್ ಆರಿಸಿಕೊಂಡಿದ್ದು ಸಾಹಿತ್ಯ ಕೃಷಿಯನ್ನ!
ಬರೀ 18 ವರ್ಷದ ಯುವಕ ತತ್ವಜ್ಞಾನ, ಜೀವನ ಮೌಲ್ಯ, ದೇವರ ಅಸ್ತಿತ್ವಗಳ ಬಗ್ಗೆ ಯಾರ ಸಹಾಯವೂ ಇಲ್ಲದೇ ಅಧ್ಯಯನ ಮಾಡಿ ಒಂದು ಕೃತಿ ರಚಿಸುತ್ತಾನೆ ಎಂದರೆ ಅದು ಆತನನ್ನು ಬೆಳೆಸಿದ ತಂದೆ ತಾಯಿಗೆ ಸಲ್ಲಬೇಕಾದ ಶ್ರೇಯಸ್ಸು!
ಸಂತೋಷ್ ಲಾಡ್ ಅವರಂತಹ ತಂದೆಯನ್ನು ಪಡೆದ ಕರಣ್ ಲಾಡ್ ಹೇಗೆ ಭಾಗ್ಯವಂತರೋ, ಇಷ್ಟು ಕಿರಿಯ ವಯಸ್ಸಿನಲ್ಲಿ ಇಂತಹ ಸಾಧನೆ ಮಾಡಿದ ಕರಣ್ ಲಾಡ್ ಅವರನ್ನು ಮಗನಾಗಿ ಪಡೆದ ಸಂತೋಷ್ ಲಾಡ್ ಅವರು ಕೂಡ ಅಷ್ಟೇ ಭಾಗ್ಯವಂತರು!
ಕರಣ್ ಲಾಡ್ ನಮ್ಮೂರಿನ ಹೆಮ್ಮೆಯ ಮಗ! ಅವರ ಸಾಧನೆ ಲಕ್ಷಾಂತರ ಯುವ ಜನತೆಗೆ ಪ್ರೇರಣೆಯಾಗಲಿ!