ಸಂತೋಷ ಲಾಡ ಕಾರ್ಯಕ್ರಮ ಹಾಳು ಮಾಡಲು “ಕಿತ್ ಬೀ”- ಲಾಡ ಬೆಂಬಲಿಗರ ಬಳಿ ಪ್ರಮುಖನ ಆಡೀಯೋ…!

ಧಾರವಾಡ: ಮಾಜಿ ಸಚಿವ ಸಂತೋಷ ಲಾಡ ಅವರು ಕಳೆದ ಮೂರು ದಿನದಿಂದ ನಿರಂತರವಾಗಿ ಕಲಘಟಗಿ ಕ್ಷೇತ್ರದಲ್ಲಿ ಅಕ್ಕಿಯನ್ನ ಹಂಚುತ್ತಿದ್ದು, ಕೆಲವು ಕಿರಾತಕರು ಅಲ್ಲಲ್ಲಿ, ಕಾರ್ಯಕ್ರಮ ವಿಫಲಗೊಳಿಸುವ ಪ್ರಯತ್ನವನ್ನ ಮುಂದುವರೆಸಿದ್ದಾರೆಂದು ಗೊತ್ತಾಗಿದೆ.
ಮಾಜಿ ಶಾಸಕರಾಗಿರುವ ಸಂತೋಷ ಲಾಡ, ತಮ್ಮ ಕ್ಷೇತ್ರದ ಜನರಿಗೆ ಸಹಾಯವೆಂದು ಹೇಳುವುದಕ್ಕಿಂತ ಮನೆ ಮಗನಂತೆ ನಿಂತು, ಕೈಲಾಗಿದ್ದನ್ನ 2 ಕೋಟಿ ವೆಚ್ಚದಲ್ಲಿ ಮಾಡುತ್ತಿದ್ದಾರೆ. ಆದರೆ, ಕೆಲವು ಕೆಲಸಕ್ಕೆ ಬಾರದವರು, ಸಂತೋಷ ಲಾಡ ಹೆಸರಿಗೆ ಮಸಿ ಬಳಿಯುವ ಯತ್ನಕ್ಕೆ ಮುಂದಾಗಿದ್ದಾರೆಂದು ಗೊತ್ತಾಗಿದೆ.

ಮಾಜಿ ಸಚಿವ ಸಂತೋಷ ಲಾಡ ಹೋದ ಕಡೆಯಲ್ಲೆಲ್ಲಾ, ಜನರು ಸೇರುತ್ತಿದ್ದಾರೆ. ಇದನ್ನ ಸಹಿಸಿಕೊಳ್ಳದ ಕೆಲವರು, ಪೋಸ್ಟರ್ ಹಂಚುವವರನ್ನ ಮುಂದೆ ಬಿಟ್ಟು, ಲಾಡ ಅವರನ್ನ ಹೀಯಾಳಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಅದೀಗ, ನಿನ್ನೆಯೂ ನಡೆದಿದ್ದು, ಕೊನೆ ಕ್ಷಣದಲ್ಲಿ ವಿಫಲವಾಗಿದೆ ಎನ್ನಲಾಗಿದೆ.
ಸಾರ್ವಜನಿಕ ಜೀವನದಲ್ಲಿರುವ ಪ್ರಮುಖರು, ತೀರಾ ಕೆಳಮಟ್ಟಕ್ಕೆ ಇಳಿದಾಗ ಮಾತ್ರ ಮತ್ತೊಬ್ಬರನ್ನ ಕಾಲೆಳೇಯುವುದಕ್ಕೆ ಮುಂದಾಗುವುದು ಸಹಜ. ಇಲ್ಲವೇ, ಕಿತಾಪತಿ ಮಾಡುವುದರಿಂದ ಮಾತ್ರ ಸಂತೋಷ ಲಾಡ ಅವರನ್ನ ಹಿಂದೆ ಸರಿಸಬಹುದೆಂಬ ಹುಚ್ಚು ಕಲ್ಪನೆ ಹೊಂದಿರಬೇಕಷ್ಟೇ.
ಸಂತೋಷ ಲಾಡ ವಿರುದ್ಧ ಯಾವುದೇ ಷಡ್ಯಂತ್ರಗಳು ನಡೆಯಬಾರದೆಂದು ಅವರ ಸುತ್ತಮುತ್ತಲಿನ ನೂರಾರೂ ಕಾರ್ಯಕರ್ತರು ಹಗಲಿರುಳು ಕಾಯುತ್ತಿದ್ದಾರೆ. ನಿನ್ನೆ ಮಿಶ್ರಿಕೋಟಿಯಲ್ಲಿ ಏನಾದರೂ, ಷಡ್ಯಂತ್ರ ಫಲ ನೀಡಿದ್ದರೇ, ಲಾಡ ಬೆಂಬಲಿಗರು ಕೈ ಕಟ್ಟಿ ಕೂತಿರಲಿಲ್ಲವೆಂದು ಹೇಳಲಾಗಿದ್ದು, ಮಾಡಿದವರಿಗಿಂತ ಮಾಡಿಸಿದವರ ಆಡೀಯೋ ಕೂಡಾ, ಸಂತೋಷ ಲಾಡ ಬೆಂಬಲಿಗರ ಬಳಿ ಇದೆ ಎಂದು ಹೇಳಲಾಗಿದೆ.