Posts Slider

Karnataka Voice

Latest Kannada News

ಸಂತೋಷ ಲಾಡ ಬಗ್ಗೆ “ಚುಗ್ಲಿ”- ವೇದಿಕೆಯಲ್ಲೇ ಭಟ್ಟಂಗಿಗಳಿಗೆ ಎದುರೇಟು ಕೊಟ್ಟ ‘ಗಣಿಧಣಿ’…

Spread the love

ಕಲಘಟಗಿ: ಕಾಂಗ್ರೆಸ್ ಪಕ್ಷದಲ್ಲಿ ಸುಳ್ಳು ಹೇಳುತ್ತಾರೆಂದು ಕಥೆ ಕಟ್ಟುವ ಜನರಿಗೆ ವೇದಿಕೆಯಲ್ಲಿ ಸಾಕ್ಷ್ಯವನ್ನ ಮಾಜಿ ಸಚಿವ ಸಂತೋಷ ಲಾಡ ನೀಡಿ, ಎದುರಾಳಿಗಳ ‘ಔಕಾದ್’  ತೋರಿಸಿದ ಘಟನೆ ನಡೆದಿದೆ.

ಕಲಘಟಗಿಯ ನಿವಾಸದಲ್ಲಿ ವಿಧಾನಪರಿಷತ್ ಚುನಾವಣೆಯ ಪ್ರಚಾರವಾಗಿ ಮಾತನಾಡುತ್ತಿದ್ದ ಮಾಜಿ ಸಚಿವ ಸಂತೋಷ ಲಾಡ, ಕೆಲವರು ಸುಳ್ಳೆ ಸುಳ್ಳು ಕಥೆಗಳನ್ನ ಹೇಳುತ್ತಾರೆ. ಹೀಗಾಗಿ ಸಲೀಂ ಅಹ್ಮದ ಅವರೇ ಒಮ್ಮೆ ನೋಡಿಬಿಡಿ, ಬಂದವರೆಲ್ಲರೂ ಪಂಚಾಯತಿ ಸದಸ್ಯರೇ, ಕೈ ಎತ್ತಿ ಎಂದು ಹೇಳುವ ಮೂಲಕ ಸುಳ್ಳನ್ನ ಹಬ್ಬಿಸುವ ‘ರಾಜಕೀಯ ನೀಚ’ರಿಗೆ ಎದುರೇಟು ನೀಡಿದರು.

ಸಂತೋಷ ಲಾಡ ಅವರು ಕಳೆದ ಎರಡು ದಿನಗಳಿಂದ ಕಲಘಟಗಿ ಕ್ಷೇತ್ರದಲ್ಲಿನ ವಿವಿಧ ಪಂಚಾಯತಿಗಳಿಗೆ ತೆರಳಿ, ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಅವರ ಪರವಾಗಿ ಮತಯಾಚನೆ ನಡೆಸಿದ್ದಾರೆ.


Spread the love

Leave a Reply

Your email address will not be published. Required fields are marked *