ಕಲಘಟಗಿಯಲ್ಲಿ ಅಕ್ರಮ ಮದ್ಯ: ಬೀದಿಗಿಳಿಯೋ ಎಚ್ಚರಿಕೆ ನೀಡಿದ ಮಾಜಿ ಸಚಿವ ಸಂತೋಷ ಲಾಡ…!

ಕಲಘಟಗಿ: ತಾಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ವಾರದೊಳಗೆ ಅದನ್ನ ಬಂದ್ ಮಾಡಿಸದೇ ಹೋದಲ್ಲಿ, ರಸ್ತೆಯನ್ನ ಬಂದ್ ಮಾಡಿ ಹೋರಾಟ ಮಾಡಲಾಗುವುದೆಂದು ಮಾಜಿ ಸಚಿವ ಸಂತೋಷ ಲಾಡ ಎಚ್ಚರಿಕೆ ನೀಡಿದರು.
ಕಲಘಟಗಿಯಲ್ಲಿ ಮಾತನಾಡಿದ ಮಾಜಿ ಸಚಿವ ಸಂತೋಷ ಲಾಡ ಹೇಳಿದ್ದು ಇಲ್ಲಿದೆ ನೋಡಿ..
ಈ ಸಂಬಂಧ ಜಿಲ್ಲಾಧಿಕಾರಿಯೂ ಸೇರಿದಂತೆ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಪತ್ರವನ್ನ ಬರೆಯುತ್ತೇನೆ. ನಾನು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿದ ಸಮಯದಲ್ಲಿ ಮಹಿಳೆಯರು ತಮ್ಮ ನೋವನ್ನ ನನಗೆ ಹೇಳಿದ್ದಾರೆ. ಬಹುತೇಕ ಯುವ ಸಮುದಾಯ ಇದರಿಂದ ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ವಾರದಲ್ಲಿ ಇದಕ್ಕೊಂದು ಅಂತ್ಯ ಹಾಡಬೇಕು. ಇಲ್ಲದಿದ್ದರೇ, ಹೋರಾಟ ನಡೆಯತ್ತೆ ಎಂದರು.