Posts Slider

Karnataka Voice

Latest Kannada News

ಬಜೆಟ್ ಕುರಿತು ಕ.ಸ.ಗ್ರಾಮೀಣ ಪ್ರಾ.ಶಾ.ಶಿ.ಸಂಘ..ಹೇಳಿದ್ದೇನು ಗೊತ್ತಾ…?

1 min read
Spread the love

ಹುಬ್ಬಳ್ಳಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡನೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರತಿಕ್ರಿಯೆ ನೀಡಿದ್ದು, ಸಮೂಹ ನಿರಾಸೆಯನ್ನ ವ್ಯಕ್ತಪಡಿಸಿದೆ.

shri ASHOK SAJJAN

ಕಳೆದ ಫೆಬ್ರುವರಿ 22ರಂದೇ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರವನ್ನ ಬರೆದಿದ್ದ ಸಂಘವೂ, ತಮ್ಮ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ಆ ಮನವಿಯಲ್ಲಿ ಬಹುತೇಕ ಬೇಡಿಕೆಗಳು ಈಡೇರದೇ ಇರುವುದು ಶಿಕ್ಷಕರಲ್ಲಿ ನಿರಾಸೆ ಮೂಡಿಸಿದೆ.

shri. MALLIKARJUN UPPIN

ಈ ಬಗ್ಗೆ ಸಂಘವೂ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಲಿಕಾ ‌ಸಾಮಗ್ರಿ ಹಾಗೂ ಡಿಜಿಟಲ್ ಶಾಲೆಗಳನ್ನು  ಒದಗಿಸುವ ಪ್ರಸ್ತಾವ ನಮ್ಮ ಸಂಘದ ಬೇಡಿಕೆಯಾಗಿತ್ತು. ಅದನ್ನು ಈಡೇರಿಸಿದ್ದನ್ನು ನಮ್ಮ ಸಂಘವು ಸ್ವಾಗತಿಸುತ್ತದೆ. ಆದರೆ, ಸರ್ಕಾರಿ ನೌಕರರಿಗೆ ಶಿಕ್ಷಕರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ಒದಗಿಸದಿರುವುದು ನಿರಾಸೆ ಮೂಡಿಸಿದೆ. ಮುಂಬರುವ ದಿನಗಳಲ್ಲಾದರೂ ನಮ್ಮ ಇನ್ನುಳಿದ ಆರ್ಥಿಕ ಸೌಲಭ್ಯ ಈಡೇರಿಸುವ ಭರವಸೆ ಹೊಂದಿದ್ದೇವೆ ಎಂದು ಸಂಘ ರಾಜ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ  ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ.ಸಿ.ಉಪ್ಪಿನ ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed