ಷಡಕ್ಷರಿಯವರೇ ನೀವೂ ಮಾತಾಡೋದು ಹೀಗಾ…!? ಹೇಳಿಕೆ ಮರಳಿ ಪಡೆಯಲು ಆಗ್ರಹ…

ಧಾರವಾಡ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ರಾಯಚೂರಿಗೆ ಬಂದಿದ್ದ ಸಂದರ್ಭದಲ್ಲಿ ಸ್ವಂತ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ ಕೊಡಿಸಿ ಎಂದಾಗ ಇನ್ನುಳಿದ ಸಮಸ್ಯೆಗಳ ಕುರಿತು ಇಷ್ಟು ದಿವಸ ನೀವು ಮತ್ತು ನಿಮ್ಮ ಸಂಘದವರು ಮನೇಲಿ ಏನು ಮಾಡ್ತಿದ್ರೀ ಎಂದು ಪ್ರಶ್ನಿಸಿ, ಇನ್ನುಳಿದ ಸಂಘದವರನ್ನ ಹೀಯಾಳಿಸಿರುವ ಘಟನೆ ನಡೆದಿದೆ.
ಅದು ಹೇಗೆ ಇಲ್ಲಿದೆ ನೋಡಿ ವೀಡಿಯೋ..
ಇನ್ನೊಂದು ವೀಡಿಯೋ ಇದೆ ನೋಡಿ..
ಈ ಹೇಳಿಕೆಯನ್ನು ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಎಮ್ ಸಜ್ಜನ, ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಖಂಡಿಸಿದ್ದಾರೆ. ಅಲ್ಲದೆ, ಈ ಹೇಳಿಕೆ ಹಿಂಪಡೆದು ನಾಡಿನ ಶಿಕ್ಷಕರಲ್ಲಿ ಕ್ಷಮೆ ಕೇಳಬೇಕೆಂದಿದ್ದಾರೆ.