Posts Slider

Karnataka Voice

Latest Kannada News

ಧಾರವಾಡದಲ್ಲಿ 70 ಲಕ್ಷ ಮೌಲ್ಯದ ಶ್ರೀಗಂಧ ರೇಡ್

1 min read
Spread the love

ಧಾರವಾಡ: ಅಕ್ರಮವಾಗಿ ಶ್ರೀಗಂಧವನ್ನ ಸಂಗ್ರಹಿಸಿ ಅವುಗಳನ್ನ ತುಂಡು ತುಂಡು ಮಾಡಿ ಆಂದ್ರಪ್ರದೇಶಕ್ಕೆ ಸಾಗಾಟ ಮಾಡುತ್ತಿದ್ದ ಸಮಯದಲ್ಲಿ ಧಾರವಾಡ ವಲಯದ ಅರಣ್ಯಾಧಿಕಾರಿಗಳು ದಾಳಿ ಮಾಡಿ 70 ಲಕ್ಷ ಮೌಲ್ಯದ ಶ್ರೀಗಂಧವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಶ್ರೀಶೈಲ ಪಾಟೀಲ ಹಾಗೂ ಪರಸಪ್ಪ ಭಜಂತ್ರಿ ಎಂಬುವವರಿಗೆ ಸೇರಿದ ವಾಹನದಲ್ಲಿ ಶ್ರೀಗಂಧದ ತುಂಡುಗಳನ್ನ ಮಾಡಿ, ಆಂದ್ರಪ್ರದೇಶಕ್ಕೆ ಸಾಗಾಟ ಮಾಡುತ್ತಿದ್ದ ಬೆಳಗಾವಿ ಜಿಲ್ಲೆಯ ಖನಗಾಂವ ಗ್ರಾಮದ ಐವರನ್ನ ಬಂಧನ ಮಾಡಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಸಮಯದಲ್ಲಿ ನಾಲ್ಕು ಚೀಲ ಹಾಗೂ ಕಾರಿನ ಡಿಕ್ಕಿಯಲ್ಲಿ ಶ್ರೀಗಂಧವನ್ನ ಸಾಗಾಟ ಮಾಡುತ್ತಿದ್ದರು. ಐವರ ಆರೋಪಿಗಳ ಹಿನ್ನೆಯನ್ನ ತಿಳಿದುಕೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.

ಬಂಧಿತರನ್ನ ಪರಸಪ್ಪ ಭಜಂತ್ರಿ, ಮಾರುತಿ ಭಜಂತ್ರಿ, ಕಲ್ಲಪ್ಪ ಶಿಂಧೆ, ಮಹದೇವ ಹಾಗೂ ರಾಜು ಭಜಂತ್ರಿ ಎಂದು ಗುರುತಿಸಲಾಗಿದೆ.


Spread the love

Leave a Reply

Your email address will not be published. Required fields are marked *