Posts Slider

Karnataka Voice

Latest Kannada News

ಅಕ್ರಮ ದಂಧೆ- ಟ್ರ್ಯಾಕ್ಟರ್ ಹಾಯಿಸಿ “ಹೆಡ್‌ಕಾನ್ಸಟೇಬಲ್” ಹತ್ಯೆ…!!!

Spread the love

ಅಕ್ರಮವನ್ನ ತಡೆಯಲು ಹೋದಾಗ ದುರ್ಘಟನೆ

ಸ್ಥಳದಲ್ಲಿ ಪ್ರಾಣಬಿಟ್ಟ ‘ಜಮಾದಾರ’

ನಿರಂತರವಾಗಿ ನಡೆಯುತ್ತಿದೆ ಅಕ್ರಮ ದಂಧೆ

ಕಲಬುರಗಿ: ಖಚಿತ ಮಾಹಿತಿ ಮೇರೆಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ ಹೋಗಿದ್ದ ಮುಖ್ಯಪೇದೆಯೋರ್ವರನ್ನ ಟ್ರ್ಯಾಕ್ಟರ್ ಹಾಯಿಸಿ ಹತ್ಯೆ ಮಾಡಿರುವ ಪ್ರಕರಣ ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಪುರದ ಬಳಿ ತಡರಾತ್ರಿ ನಡೆದಿದೆ.

ಹತ್ಯೆಗೀಡಾಗಿರುವ ಹೆಡ್‌ಕಾನ್ಸಟೇಬಲ್‌ರನ್ನ ಭೀಮು ಚವ್ಹಾಣ ಎಂದು ಗುರುತಿಸಲಾಗಿದ್ದು, ಟ್ರ್ಯಾಕ್ಟರ್ ಹಿಂಬದಿಯ ಚಕ್ರದಲ್ಲಿ ಸಿಲುಕಿರುವುದು ಕಂಡು ಬಂದಿದೆ. ಘಟನೆಯಿಂದ ಇಲಾಖೆಯ ಸಿಬ್ಬಂದಿಗಳು ಜರ್ಝರಿತಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ದಂಧೆಯನ್ನ ತಡೆಗಟ್ಟಲು ಇಲಾಖೆ ಹಲವು ರೀತಿಯಲ್ಲಿ ಪ್ರಯತ್ನ ನಡೆಸಿದ್ದರೂ ಯಾವುದೇ ಪ್ರಯೋಜನ ಆಗದೇ ಇರುವುದೇ ಅಚ್ಚರಿಯಾಗಿದೆ. ಅದಕ್ಕಾಗಿ ಓರ್ವ ಸಿಬ್ಬಂದಿ ಪ್ರಾಣವನ್ನ ತೆಗೆದ ಕಿರಾತಕರನ್ನ ಇಲಾಖೆ ಹೆಡಮುರಿಗೆ ಕಟ್ಟಬೇಕಿದೆ.


Spread the love

Leave a Reply

Your email address will not be published. Required fields are marked *