ಏಳು ಜನರಿಗೆ ಹೊಸ ಬದುಕು ನೀಡಿದ ‘ಸಂಚಾರಿ ವಿಜಯ” ಅಂಗಾಂಗಗಳು..!

ಬೆಂಗಳೂರು: ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡ ನಂತರ ಚಿತ್ರನಟ ಸಂಚಾರಿ ವಿಜಯ ಅವರ ದೇಹದ ಏಳು ಭಾಗಗಳನ್ನ ಬೇರೆಯವರಿಗೆ ದಾನ ಮಾಡಿದ್ದು, ಇದೀಗ ಏಳು ಜನರಿಗೆ ಹೊಸ ಬದುಕು ಸಿಗಲಿದೆ.

ಆಕಸ್ಮಿಕ ಘಟನೆಯಲ್ಲಿ ಇನ್ನಿಲ್ಲವಾದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ ಅವರ, ಕಣ್ಣು, ಪಿತ್ತಕೋಶ, ಮೂತ್ರಪಿಂಡ, ಹೃದಯದ ಕಚಾಟಗಳನ್ನ ಕುಟುಂಬದವರು ದಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಏಳು ಜನರಿಗೆ ಅನುಕೂಲವಾಗಿದೆ.
ಸಂಚಾರಿ ವಿಜಯ ಅವರು ಬದುಕುವುದಿಲ್ಲವೆಂದು ಗೊತ್ತಾದ ತಕ್ಷಣವೇ, ಅವರ ಮನೆಯವರೆಲ್ಲರೂ ಕೂಡಿಕೊಂಡು ಇಂತಹ ಮಹಾನ್ ನಿರ್ಧಾರವನ್ನ ತೆಗೆದುಕೊಂಡು ಏಳು ಕುಟುಂಬಗಳಿಗೆ ಆಸರೆಯಾಗಿದ್ದಾರೆ.
ಅಂಗಾಂಗಗಳನ್ನ ದಾನ ಪಡೆದವರಿಗೆ ಕಸಿಯನ್ನ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.