ಸಲಕಿನಕೊಪ್ಪದಲ್ಲಿ ಬಡವರಿಗೆ ಆಹಾರ ಕಿಟ್: ಕೊರೋನಾ ಸಮಯದಲ್ಲಿ ಕೈ ಹಿಡಿದ ಪ್ರಮುಖರು…!

ಧಾರವಾಡ: ಕೊರೋನಾ ಸಮಯದಲ್ಲಿ ಸಂಕಷ್ಟದಲ್ಲಿರುವ ಬಡವರಿಗೆ ಹಲವರು ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದ್ದು, ಸಲಕಿನಕೊಪ್ಪದಲ್ಲೂ ಹಲವು ಕುಟುಂಬಗಳಿಗೆ ಸಹಾಯ ಮಾಡಲಾಗಿದೆ.

ಮನಸೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಲಕಿನಕೊಪ್ಪ ಗ್ರಾಮದಲ್ಲಿ 75 ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನ ವಿತರಣೆ ಮಾಡಲಾಯಿತು.

ಗ್ರಾಮ ಪಂಚಾಯತಿ ಸದಸ್ಯ ರಿಯಾಜ್ ನಿಪ್ಪಾಣಿ, ನಿಂಗವ್ವ ಬಾವಿ, ತಿಪ್ಪವ್ವ ಹರಿಜನ, ಅನಸೂಯಾ ಕರ್ಲವಾಡ, ಜಾಫರ್ ಪೆಟ್ರೋಲ್ ಪಂಪ್ ನ ಅಶೋಕ್ ಕುದರಿಮನಿ, ನವೀನ್ ಕುಲಕರ್ಣಿ, ಜಬ್ಬಾರ್ ನಿಪ್ಪಾಣಿ, ಮುತ್ತು ಬೆಳ್ಳಕ್ಕಿ, ಸೋಮು ಬೈಲ್ವಾಡ, ನಾಗರಾಜ್ ಕುಂದರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.