Posts Slider

Karnataka Voice

Latest Kannada News

ಸಿಡಿ ಪ್ರಕರಣ: ದೇಶ ಕಾಯ್ದ ಸೈನಿಕನ ಕುಟುಂಬದ ಸ್ಥಿತಿ…!

1 min read
Spread the love

ಬೆಳಗಾವಿ: ರಾಜ್ಯದ ರಾಜಕಾರಣದ ಮಗ್ಗುಲಿಗೆ ಸಿಡಿ ಪ್ರಕರಣ ಬಿದ್ದ ನಂತರ, ದೇಶ ಕಾಯ್ದು ಬಂದ ಸೈನಿಕ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಡಿ.ಕೆ.ಶಿವುಕುಮಾರ ಬಗ್ಗೆಯೂ, ಡಿಕೆಶಿ ಜಾರಕಿಹೊಳಿ ಅವರ ಬಗ್ಗೆಯೂ ಮಾತನಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ…

ಈ ಮಾತುಗಳನ್ನ ಒಮ್ಮೆ ಕೇಳಿ ಬಿಡಿ…

ಯುವತಿ ಡಿ.ಕೆ.ಶಿವುಕುಮಾರ ಕಪಿಮುಷ್ಟಿಯಲ್ಲಿದ್ದಾರೆಂದು ಕುಟುಂಬದವರು ದೂರುತ್ತಿದ್ದಾರೆ. ಅತ್ತ ಯುವತಿ, ತನ್ನ ಕುಟುಂಬದವರ ಯಾರದೋ ಒತ್ತಡದಿಂದ ಏನೇನೋ ಹೇಳುತ್ತಿದ್ದಾರೆಂದು ವೀಡಿಯೋ ಹರಿ ಬಿಡುತ್ತಿದ್ದಾಳೆ. ಈ ಎರಡು ತದ್ವಿರುದ್ಧಗಳ ನಡುವೆ ಇಬ್ಬರ ರಾಜಕಾರಣಿಗಳು ಹೆಸರು ತಳಕು ಹಾಕಿಕೊಳ್ಳುತ್ತಲೇ ನಡೆದಿದೆ.

ಅಸಲಿಗೆ ಇದು ಒಂದು ಕಡೆಯಾದರೇ, ಒಂದೇ ಕುಟುಂಬದ ಕುಡಿಗಳು ಒಬ್ಬರಿಗೊಬ್ಬರು ಆರೋಪ ಮಾಡುವಂತಾಗಿದ್ದು ದುರ್ದೈವವೇ ಸರಿ. ಮಗಳು, ಪಾಲಕರ ಬಗ್ಗೆಯೂ, ಪಾಲಕರು ಮಗಳ ಬಗ್ಗೆಯೂ ಆತಂಕವನ್ನ ಹೊರ ಹಾಕುತ್ತಿದ್ದಾರೆ. ನಿಜ ಹೇಳಬೇಕೆಂದರೇ, ಈ ಕುಟುಂಬವೊಂದು ನೆಮ್ಮದಿಯನ್ನ ಹಾಳು ಮಾಡಿಕೊಂಡು ಕೂತಿರುವುದಂತೂ ಸತ್ಯ..

ದೇಶ ಸೇವೆ ಮಾಡಿ ಬಂದ ಸೈನಿಕ ಕುಟುಂಬಕ್ಕೆ ಆಗಿರುವ ಸಮಸ್ಯೆಯನ್ನ ಬಗೆಹರಿಸುವ ದೇಶ ಪ್ರೇಮಿಗಳು, ಇಂತಹ ವಿಷಯದಲ್ಲಿ ಮಾತನಾಡುವುದು ಹೇಗೆ ಎಂದು ಸುಮ್ಮನೆ ಕೂಡದೇ, ನೋವು ಅನುಭವಿಸುತ್ತಿರುವುದು ಒಂದು ಸೈನಿಕನ ಕುಟುಂಬ ಎಂಬುದನ್ನ ತಿಳಿದುಕೊಂಡು ಮುನ್ನಡೆಯುವುದು ಒಳತಲ್ಲವೇ…!


Spread the love

Leave a Reply

Your email address will not be published. Required fields are marked *