Posts Slider

Karnataka Voice

Latest Kannada News

ಬರ್ತಡೇ ನೆಪದಲ್ಲಿ ಇಸ್ಮಾಯಿಲ್ ತಮಾಟಗಾರ ರೂಲ್ಸ್ ಬ್ರೇಕ್: ಜಿಲ್ಲಾಧಿಕಾರಿಗಳೇ ಇದೇನು ಕಥೆ…!

Spread the love

ಧಾರವಾಡ: ಕೊರೋನಾ ಪ್ರಕರಣಗಳು ಚೂರು ಕಡಿಮೆಯಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದು, ಜಿಲ್ಲಾಡಳಿತದ ನಿಯಮಗಳು ಜಾರಿಯಲ್ಲಿವೆ. ಆದರೂ, ಮುಖಂಡರು ಮಾತ್ರ, ತಮ್ಮತನವನ್ನ ಬಿಡದೇ ಇರುವುದು ಕಂಡು ಬರುತ್ತಿದೆ.

ಧಾರವಾಡದ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಎದುರು ಎರಡು ಸಲ ಪಶ್ಚಿಮ ಕ್ಷೇತ್ರದಿಂದ ಪರಾಜಿತಗೊಂಡಿರುವ ಇಸ್ಮಾಯಿಲ ತಮಾಟಗಾರ, ಇಂದು ತಮ್ಮ ಬರ್ತಡೇ ಆಚರಿಸಿಕೊಳ್ಳುವುದಕ್ಕಾಗಿ ಕೈಗೊಂಡ ಕಾರ್ಯದ ಜಾತ್ರೆಯನ್ನೋಮ್ಮೆ ನೋಡಿ ಬಿಡಿ.

ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಇಂತಹ ಘಟನೆಗಳ ಬಗ್ಗೆ ಜಾಗೃತೆ ವಹಿಸಬೇಕಿದೆ. ಹೊಟೇಲ್ ಗಳಿಗೆ ಸಂಜೆ 5ರ ವರೆಗೆ ಸಮಯ ಕೊಟ್ಟು ಜನರ ಆರೋಗ್ಯ ಕಾಪಾಡುವ ವಾಗ್ದಾನ್ ಮಾಡ್ತಾರೆ. ಇಂತಹ ಘಟನೆಗಳು ನಡೆದಾಗ, ಇದಕ್ಕೇನು ಮಾಡಬೇಕಾಗತ್ತೆ ನೀವೇ ನೋಡಿ. ಮೈನುದ್ಧೀನ ನದಾಫ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದೆ.

ಕೈಲಾಗದವರ ವಿರುದ್ಧ ಕಾನೂನು ಕ್ರಮವನ್ನ ಜರುಗಿಸುವುದು ಪೊಲೀಸರಿಗೂ ತಕ್ಕುದ್ದಲ್ಲ. ದಕ್ಷ ಅಧಿಕಾರಿ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಇದಕ್ಕೊಂದು ಪಾಠ ಕಲಿಸಬೇಕಿದೆ, ಅಲ್ಲವೇ.


Spread the love

Leave a Reply

Your email address will not be published. Required fields are marked *