ಹುಬ್ಬಳ್ಳಿ ಘಂಟಿಕೇರಿಯಲ್ಲಿ ಜನಜಂಗುಳಿ ಸೇರಿಸಿದ ಕಾಂಗ್ರೆಸ್ ಮುಖಂಡ ನಿರಂಜನಯ್ಯ ಹಿರೇಮಠ….!
1 min readಹುಬ್ಬಳ್ಳಿ: ಕೊರೋನಾ ನಿಯಮಗಳನ್ನ ಪಾಲನೆ ಮಾಡಬೇಕಾದವರೇ ಜನರನ್ನ ಸೇರಿಸಿ, ವ್ಯವಸ್ಥೆಯನ್ನ ಹಾಳು ಕೆಡುವುತ್ತಿರುವುದು ನಗರದಲ್ಲಿ ಕಡಿಮೆಯಾಗುತ್ತಿಲ್ಲ. ಇಂದು ಕೂಡಾ ಅಂತಹದೇ ಘಟನೆಯೊಂದು ಹುಬ್ಬಳ್ಳಿಯ ಘಂಟಿಕೇರಿ ಓಣಿಯ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.
ಪೌರ ಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತರನ್ನ ಹಾಗೂ ನರ್ಸಗಳಿಗೆ ದಿನಸಿ ಕಿಟ್ ವಿತರಣೆ ಮಾಡಲು ಮುಂದಾಗಿದ್ದ ಕಾಂಗ್ರೆಸ್ ಮುಖಂಡ ನಿರಂಜನಯ್ಯ ಹಿರೇಮಠ, ಹೇಗೆ ಕೊರೋನಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ ನೀವೇ ನೋಡಿ..
ಜನರಿಗೆ ಸಹಾಯ ಮಾಡುವಾಗಲೂ ಜಿಲ್ಲಾಡಳಿತದ ನಿಯಮಗಳನ್ನ ಮರೆತು ನಡೆದುಕೊಳ್ಳಲಾಗಿದೆ. ಇಂತವರಿಗೆ ಪಾಲಿಕೆ ದಂಡವನ್ನ ಹಾಕಿ ಸುಮ್ಮನಾಗತ್ತೆ. ಆದರೆ, ಇವೇ ಕಾರಣಗಳಿಂದ ಕೊರೋನಾ ಪ್ರಕರಣಗಳು ಹೆಚ್ಚಾದರೇ, ಆ ಕುಟುಂಬಗಳ ಸ್ಥಿತಿ ಏನು..