Posts Slider

Karnataka Voice

Latest Kannada News

ಮಂಜುನಾಥನ ಲಾರಿ ಸಮೇತ ಕಳ್ಳಕ್ಕಿಯವ ಬಂಧನ..!

1 min read
Spread the love

ವಿಜಯಪುರ: ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಅಕ್ಕಿ ಸಾಗಾಟ ಮಾಡುವ ವೇಳೆ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ಕಿ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ಬಾಗಲಕೋಟ ಜಿಲ್ಲೆಯ ಗದ್ದನಕೇರಿ ನಿವಾಸಿ ಸದ್ದಾಂ ಅಮೀನಸಾಬ್ ಜಂಗಿ ಬಂಧಿತ ಆರೋಪಿ. ಇನ್ನು ಬಂಧಿತ ಆರೋಪಿ ಸದ್ದಾಂ ಅಕ್ರಮವಾಗಿ 8 ಲಕ್ಷ ಮೌಲ್ಯದ 296 ಕ್ವಿಂಟಲ್ ಅಕ್ಕಿಯನ್ನು ವಿಜಯಪುರದಿಂದ ನಿಡಗುಂದಿ ಮಾರ್ಗವಾಗಿ ತೆಗೆದುಕೊಂಡು ಹೋಗುವಾಗ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಮನಗೂಳಿ ಪೊಲೀಸರು ದಾಳೆ‌ ನಡೆಸಿದ್ದಾರೆ.

ಅಲ್ಲದೇ, KA-29 B-8299 ನಂಬರಿನ್ ವಾಹನದಲ್ಲಿ ಅಕ್ರಮ ಅಕ್ಕಿ ಸಾಗಾಟಕ್ಕೆ ಸದ್ದಾಂ ಯತ್ನಿಸಿದ್ದಾನೆ. ಈ ಕುರಿತು ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಖಲೆಯ ಪ್ರಕಾರ ಲಾರಿಯು ಮಂಜುನಾಥ ಹೂಲಗೇರಿ ಎಂಬುವವರಿಗೆ ಸೇರಿದ್ದೆಂದು ಪೊಲೀಸರು ಮಾಹಿತಿಯನ್ನ ಕಲೆ ಹಾಕಿದ್ದು, ಇನ್ನುಳಿದ ಮಾಹಿತಿಯನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *