“ಸಿಎಂ ಕ್ಷೇತ್ರದಲ್ಲೇ” ಕನ್ನಡ ಚಾನಲ್ ವರದಿಗಾರರ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು..

ಹಾವೇರಿ: ಸುದ್ದಿಯನ್ನ ಅರಸಿ ಹೋಗಿದ್ದ ಮೂರು ಕನ್ನಡ ವಾಹಿನಿಯ ವರದಿಗಾರರನ್ನ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆಂದು ಹೇಳಲಾಗುತ್ತಿದ್ದು, ಮೂವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಗೊತ್ತಾಗಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗ್ರಾಮವೊಂದರಲ್ಲಿ ನಕಲಿ ವೈದ್ಯರ ಬಗ್ಗೆ ವರದಿ ಮಾಡಲು ಹೋದಾಗ ದುರ್ಘಟನೆ ನಡೆದಿದೆ. ವರದಿಗಾರರೊಬ್ಬರು ಇತ್ತೀಚೆಗೆ ಖರೀದಿಸಿದ ಕಾರಿನಲ್ಲಿಯೇ ಗ್ರಾಮಕ್ಕೆ ತೆರಳಿದಾಗ ಗಲಾಟೆ ನಡೆದಿದೆ.
ಪ್ರಮುಖವಾಗಿ ಕಾರಿನ ಟೈರ್ ಪಂಚರ್ ಮಾಡಿಯೂ ವರದಿಗಾರರಿಗೆ ಕಿರುಕುಳ ನೀಡಿದ್ದು, ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.