Posts Slider

Karnataka Voice

Latest Kannada News

ಅಣ್ಣಿಗೇರಿಯ ಪತ್ರಕರ್ತ “ವೀರಣ್ಣ ಡಬರಿ” ಇನ್ನಿಲ್ಲ…

1 min read
Spread the love

ಅಣ್ಣಿಗೇರಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿದ್ದ ಪತ್ರಕರ್ತ

ಅಣ್ಣಿಗೇರಿ : ಪತ್ರಕರ್ತ, ಸ್ಥಳೀಯ ಅದಿಕವಿ ಪಂಪ ನಗರದ ನಿವಾಸಿ ವೀರಣ್ಣ ಹನುಮಂತಪ್ಪ ಡಬರಿ (45) ಅನಾರೋಗ್ಯದ ಹಿನ್ನೆಲೆಯಲ್ಲಿ ಶುಕ್ರವಾರ ನಿಧನರಾದರು.

ಅವರಿಗೆ ತಂದೆ, ತಾಯಿ, ಸಹೋದರಿ, ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವಿದೆ.

ಪ್ರಸ್ತುತ ನಾಗರಿಕ ಪತ್ರಿಕೆಯ ಅಣ್ಣಿಗೇರಿ ತಾಲೂಕಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಇದಕ್ಕೂ ಮೊದಲು ವಿಜಯ ಕರ್ನಾಟಕ, ಕನ್ನಡ ಪ್ರಭ, ಉದಯವಾಣಿ, ಸಂಜೆವಾಣಿ, ಸಂಜೆ ದರ್ಪಣ, ಹೊಸ ದಿಗಂತ ಪತ್ರಿಕೆಗಳ ತಾಲೂಕು ವರದಿಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಡಬರಿ ಅವರ ನಿಧನಕ್ಕೆ ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಶೋಕ ವ್ಯಕ್ತಪಡಿಸಿದೆ.


Spread the love

Leave a Reply

Your email address will not be published. Required fields are marked *