Posts Slider

Karnataka Voice

Latest Kannada News

ಕಾಂಗ್ರೆಸ್ ರಿವರ್ಸ್ ಆಪರೇಷನ್ ಮಾಡಿದ್ರೇ ರಾಜಕೀಯ ನಿವೃತ್ತಿ: ರೇಣುಕಾಚಾರ್ಯ

1 min read
Spread the love

ದಾವಣಗೆರೆ: ಬಿಜೆಪಿ ಶಾಸಕರನ್ನ ರಿವರ್ಸ್ ಆಪರೇಷನ್ ಮಾಡಿದ್ರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಡಿ ಕೆ ಶಿವಕುಮಾರ್ ರಿವರ್ಸ್ ಆಪರೇಷನ್ ಮಾಡಲಿ. ಬಿಜೆಪಿಯಲ್ಲಿ ಒಗ್ಗಟ್ಟಾಗಿದ್ದೇವೆ, ನಮ್ಮಲ್ಲಿ ಯಾವುದೇ ಭಿನ್ನಮತವಲ್ಲ. ಡಿಕೆಶಿ, ಸಿದ್ದರಾಮಯ್ಯ ಭ್ರಮ ನಿರಸನರಾಗಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಅವಧಿಯಲ್ಲಿ ತೊಘಲಕ್ ದರ್ಬಾರ ನಡೆಸಿದ್ದಾರೆ. ಆಡಳಿತ ಯಂತ್ರದಲ್ಲಿ ವಿಜೇಂದ್ರ ಅವರ ಹಸ್ತಕ್ಷೇಪ ಇಲ್ಲ. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಅವರ ಮಗ ಸರ್ಕಾರಿ ಕಾಮಗಾರಿ ಶಂಕು ಸ್ಥಾಪನೆ ಮಾಡಿದ್ದರು. ಆದರೆ, ವಿಜಯೇಂದ್ರ ಯಾವುದೇ ಸರ್ಕಾರಿ ಕಾರ್ಯಕ್ರಮಕ್ಕೆ ಭಾಗವಹಿಸಿಲ್ಲ. ಯತ್ನಾಳ್ ಅವರನ್ನು ಬಿಜೆಪಿಗೆ ವಾಪಾಸ್ಸು ಕರೆ ತಂದಿದ್ದೇ ಬಿಎಸ್‌ವೈ. ಅವರು ಈ ರೀತಿ ಮಾತನಾಡಬಾರದಾಗಿತ್ತು. ಅವರ ಬಗ್ಗೆ ನಮಗೂ ಗೌರವ ಇದೆ. ಪಕ್ಷದ ನಾಲ್ಕು ಗೋಡೆಯ ಮಧ್ಯ ಚರ್ಚೆ ಮಾಡಿ ಬಗೆಹರಿಸುತ್ತೇವೆ ಎಂದು ತೇಪೆ ಹಚ್ಚಲು ರೇಣುಕಾಚಾರ್ಯ ಯತ್ನಿಸಿದರು.


Spread the love

Leave a Reply

Your email address will not be published. Required fields are marked *