ರವಿಶಂಕರ ಗುರೂಜಿ ಭೇಟಿ ಮಾಡಿದ ಸಚಿವ ಅಶೋಕ: ಚಿಕಿತ್ಸೆಗೆ ಆಶ್ರಮ ನೀಡುವಂತೆ ಮನವಿ
1 min readಬೆಂಗಳೂರು: ರಾಜಧಾನಿಯಲ್ಲಿ ಪ್ರತಿದಿನವೂ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರವಿಶಂಕರ ಗುರೂಜಿ ಆಶ್ರಮಕ್ಕೆ ಭೇಟಿ ಸಚಿವ ಆರ್.ಅಶೋಕ್ ಭೇಟಿ ನೀಡಿ ಮಾತುಕತೆ ನಡೆಸಿದರು.
ಬೆಂಗಳೂರಿನಲ್ಲಿ ಕೋವಿಡ್-19 ರೋಗಿಗಳ ಸಂಖ್ಯೆ ಹೆಚ್ಚಿತ್ತಿರುವ ಹಿನ್ನಲೆಯಲ್ಲಿ ಭೇಟಿಯಾಗಿದ್ದು, ಚಿಕಿತ್ಸೆಗೆ ಆಶ್ರಮದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಿಕೊಡಬೇಕೆಂದು ಸಚಿವರು ಮನವಿ ಮಾಡಿಕೊಂಡರು.
ಸಚಿವ ಆರ್.ಅಶೋಕರಿಗೆ ುಸ್ತುವಾರಿ ನೀಡಿದ ನಂತರ ಕೊರೋನಾ ಪಾಸಿಟಿವ್ ನಿಯಂತ್ರಣ ಮತ್ತು ತಪಾಸಣೆ ಸಂಬಂಧ ಹಲವು ರೂಪುರೇಷೆ ರಚನೆ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಸ್ಥಳದ ಅಭಾವ ಬಾರದಂತೆ ಮೊದಲೇ ಹಲವು ಕಡೆ ಮಾತನಾಡುತ್ತಿದ್ದಾರೆ.
ಈ ಸಮಯದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಬೆಂ ದಕ್ಷಿಣ ಶಾಸಕ ಎಂ ಕೃಷ್ಣಪ್ಪ ಜೊತೆಗಿದ್ದರು.