ಹರ್ಲಾಪುರಗೆ ಬೆದರಿಕೆ ಹಾಕಿ ಮೊಬೈಲ್, ಹಣ ಲೂಟಿ…!

ಹುಬ್ಬಳ್ಳಿ: ನಗರದ ಬಂಕಾಪೂರ ಚೌಕ್ ಬಳಿ ನಿಂತಿದ್ದ ವ್ಯಕ್ತಿಯೋರ್ವರಿಗೆ ಕುಂದಗೋಳ ಕ್ರಾಸ್ ಬಳಿ ಡ್ರಾಫ್ ಕೊಡುವುದಾಗಿ ಕರೆದುಕೊಂಡು ಹೋಗಿ, ಬೇರೆ ಸ್ಥಳಕ್ಕೆ ಹೋಗಿ ದರೋಡೆ ಮಾಡಿ ಪರಾರಿಯಾದ ಘಟನೆ ನಡೆದಿದೆ.

ರವಿ ಹರ್ಲಾಪುರ ಎಂಬ ವ್ಯಕ್ತಿಗೆ ಕುಂದಗೋಳ ಕ್ರಾಸ್ ಬಳಿಯಲ್ಲಿ ಡ್ರಾಪ್ ಕೊಡುವದಾಗಿ ಹೇಳಿ ಬೈಕಿನಲ್ಲಿ ಹತ್ತಿಸಿಕೊಂಡ ಅಪರಿಚಿತ ವ್ಯಕ್ತಿ, ಕುಂದಗೋಳ ಕ್ರಾಸ್ ಬಳಿಯಲ್ಲಿ ಬಿಡದೇ ಬುಡರಸಿಂಗಿ ಬಳಿ ಕರೆದೊಯ್ದು ಹೆದರಿಸಿ ಅವರಿಂದ 14 ಸಾವಿರ ಬೆಲೆಯ ಮೊಬೈಲ್ ಫೋನ್ ಹಾಗೂ 1 ಸಾವಿರ ರೂಪಾಯಿ ಕಸಿದುಕೊಂಡು ಪರಾರಿಯಾಗಿದ್ದಾನೆ.

ರವಿ ಹರ್ಲಾಪುರ್ ಬಂಕಾಪುರ ಚೌಕ್ ಬಳಿಯಲ್ಲಿ ತಮ್ಮ ಊರಿಗೆ ಹೋಗುವ ಸಲುವಾಗಿ ಬಸ್ ಗಾಗಿ ಕಾಯುತ್ತಿದ್ದಾಗ ಬುಲೆಟ್ ಸವಾರನೊಬ್ಬ ಬಂದು ನಿಮ್ಮನ್ನು ಕುಂದಗೋಳ ಕ್ರಾಸ್ ಬಳಿ ಡ್ರಾಫ್ ಮಾಡುವುದಾಗಿ ಹತ್ತಿಸಿಕೊಂಡು ಹೋಗಿ, ಕುಂದಗೋಳ ಕ್ರಾಸ್ ಬಳಿಯಲ್ಲಿ ನಿಲ್ಲಿಸದೇ ಬುಡರಸಿಂಗಿ ಬಳಿ ಚಾಕು ತೋರಿಸಿ ದುಡ್ಡು ಹಾಗೂ ಮೊಬೈಲ್ ಕಸಿದುಕೊಂಡು ಹೋಗಿದ್ದಾನೆ.
ರವಿ ಹರ್ಲಾಪುರ ಘಟನೆಯ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.