Posts Slider

Karnataka Voice

Latest Kannada News

ವಾಣಿಜ್ಯನಗರಿಯಲ್ಲಿ ಕಳೆಗುಂದಿದ ರಂಗಪಂಚಮಿ: ಹೊರಗೆ ಬಾರದ ಜನತೆ

1 min read
Spread the love

ಹುಬ್ಬಳ್ಳಿ: ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಭಯವನ್ನ ಮೂಡಿಸಿರುವ ಕರೋನಾ ವೈರಸ್ ಭೀತಿ ಹುಬ್ಬಳ್ಳಿಯ ರಂಗಪಂಚಮಿಯ ಮೇಲೂ ಬಿದ್ದಿದ್ದು, ಬಹುತೇಕ ಜನರು ಮನೆಯಿಂದ ಹೊರಗೆ ಬಂದಿಲ್ಲ.

ಹುಬ್ಬಳ್ಳಿಯ ರಂಗಪಂಚಮಿ ಸಾಕಷ್ಟು ಹೆಸರುವಾಸಿಯಾಗಿದೆ. ರಂಗಿನಾಟದಲ್ಲಿ ಮಹಿಳೆಯರು, ಮಕ್ಕಳು, ಯುವಕರು ಬಣ್ಣದಾಟದಲ್ಲಿ ಮಿಂದೆಳುತ್ತಿದ್ದರು. ಆದರೆ, ಈ ಬಾರಿ ಎಲ್ಲಿಯೂ ಹಬ್ಬದ ವಾತಾವರಣ ಇಲ್ಲ. ಬದಲಿಗೆ ಬೆರಳೆಣಿಗೆ ಜನರು ಹಲಗೆ ಬಾರಿಸುತ್ತ ಕುಣಿದಾಡುವುದು ಕಾಣುತ್ತಿತ್ತು. ಇನ್ನೂ ಕೆಲವೆಡೆ ಬಂದೋಬಸ್ತ್ ಗೆ ನಿಯೋಜನೆ ಮಾಡಿದ್ದ ಪೊಲೀಸರೇ ಬಣ್ಣದಾಟದಲ್ಲಿ ಕಂಡು ಬಂದರು.

ಕರೋನಾ ವೈರಸ್ ಹಾವಳಿ ಈ ಬಾರಿಯಂತೂ ವಾಣಿಜ್ಯನಗರಿಯ ರಂಗಪಂಚಮಿಯನ್ನ ನುಂಗಿ ಹಾಕಿದ್ದು ಸುಳ್ಳಲ್ಲ.


Spread the love

Leave a Reply

Your email address will not be published. Required fields are marked *