ಧಾರವಾಡ: ರಮಜಾನ್ ಸಂಭ್ರಮದ ನಡುವೆಯೇ ಮೃತ್ಯು: ಭಾವಿ ಪತ್ನಿ ಮನೆಗೆ ಹೋಗಿ ಬರುವಾಗ ದುರಂತ
ಧಾರವಾಡ: ಭಾವಿ ಪತ್ನಿಯ ಮನೆಗೆ ರಮಜಾನ್ ಸಲಾಮಿ ಕೊಟ್ಟು ಮರಳುವಾಗ ಸಂಭವಿಸಿದ ಬೈಕ್ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ನಗರದ ಕೆಲಗೇರಿ ಸೇತುವೆ ಬಳಿ ನಡೆದಿದೆ.
ಲಕಮಾಪುರ ನಿವಾಸಿ ಇಮಾಮಸಾಬ ಖಲೀಲಸಾಬ ಹೆಬ್ಬಳ್ಳಿ (21) ಮೃತಪಟ್ಟ ದುರ್ದೈವಿ. ಬೈಕ್ನಲ್ಲಿದ್ದ ಮತ್ತೊಬ್ಬ ಯುವಕ ಮೊಹ್ಮದಯೂನೂಸ್ ಮುಲ್ಲಾನವರ (17) ಗಾಯಗೊಂಡಿದ್ದಾನೆ. ಮೃತ ಇಮಾಮಸಾಬನಿಗೆ ಕಂಬಾರಗಣವಿ ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಹಬ್ಬದ ಪ್ರಯುಕ್ತ ಹುಡುಗಿಯ ಮನೆಗೆ ಹೋಗಿ ಮರಳಿ ಬರುವಾಗ ವಿಧಿ ಆಟವಾಡಿದೆ. ಈ ಕುರಿತು ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
