Posts Slider

Karnataka Voice

Latest Kannada News

ಯಡಿಯೂರಪ್ಪ ನಾನು ಹಾವು-ಮುಂಗುಸಿ ಥರಾ ಇದ್ವಿ: ದೇವರಾಟ ಅವರನ್ನೇ ಸಿಎಂ ಮಾಡಬೇಕಾಯಿತು

1 min read
Spread the love

ರಾಯಭಾಗ: ಸಿಎಂ ಯಡಿಯೂರಪ್ಪ ಮತ್ತು ನಾನು ಹಾವು-ಮುಂಗುಸಿಯಂತೆ ಇದ್ವಿ. ದೇವರ ಆಟದ ಮುಂದೆ ನಮ್ಮ ಆಟ ಎನೂ ನಡೆಯೊಲ್ಲ. ಯಡಿಯೂರಪ್ಪ ನಾನು ಇಲಿ ಬೆಕ್ಕಿನ ಹಾಗೆ ಇದ್ವಿ, ಆದರೆ ಅವರನ್ನೆ ನಾವು ಮುಖ್ಯಮಂತ್ರಿ ಮಾಡಬೇಕಾಯ್ತು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ತಾಲೂಕಿನ ಹಳೇದಿಗ್ಗೆವಾಡಿ ಗ್ರಾಮದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಮೇಶ ಜಾರಕಿಹೊಳಿ, ಪ್ರಭಾಕರ ಕೋರೆಯವರು ನಾನು ಒಟ್ಟಿಗೆ  ರಾಜಕೀಯ ಪ್ರಾರಂಭ ಮಾಡಿದ್ದೆವು. ವಿ ಎಲ್ ಪಾಟೀಲ್ ಹಾಗೂ ಮಾಜಿ ಸಂಸದ ಶಂಕರನಾಂದರ ಶಿಷ್ಯರು ನಾವು ಎಂದರು.

ನೀರಾವರಿ ಇಲಾಖೆಯಲ್ಲಿದ್ದು  ಯಾವುದೇ ಪಕ್ಷ ಮತ್ತು ಜಾತಿ ಎಂದು ಲೆಕ್ಕ ಹಾಕೊಲ್ಲ. ಅದೇ ರೀತಿಯಲ್ಲಿ ನಾನು ಮುಂದುವರೆಯುತ್ತೆನೆ. ಜಿಲ್ಲೆಯ ನೀರಾವರಿಗಾಗಿ ಈಗಾಗಲೇ ಎರಡು ಬಾರಿ ಮೀಟಿಂಗ್ ಮಾಡಿದ್ದೆನೆ. ಜಿಲ್ಲೆಯ ಯಾವುದೇ ಒಂದು ಸಣ್ಣ ಹಳ್ಳಿಯೂ ಸಹ ನೀರಾವರಿ ವಂಚಿತವಾಗಬಾರದು‌ ಎಂಬ ನಿರ್ಣಯ ಮಾಡಿದ್ದೇನೆಂದು ಜಾರಕಿಹೊಳಿ ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನವನ್ನು ಇಟ್ಟಿರಲಿಲ್ಲ. ನಾವು ಮನವಿ ಮಾಡಿದ ನಂತರ ೧೦ ಸಾವಿರ ಕೋಟಿ ರೂಪಾಯಿ ಯಡಿಯೂರಪ್ಪ ಘೋಷಿಸಿದರು. ರಮೇಶ ಇನ್ನೊಂದು ಮೂರು ವರ್ಷ ಬಿಟ್ಟು ಕಾಂಗ್ರೇಸ್ಗೆ ಹೋಗ್ತಾನೆ ಎಂದು  ವಿರೋಧಿಗಳು ಹೇಳ್ತಾರೆ. ಆದರೆ ನನ್ನ ರಾಜಕೀಯ ಜೀವನ ಬಿಜೆಪಿಯಲ್ಲೆ ಮುಗಿಲಿದೆ ಅದಕ್ಕೆಲ್ಲ ಕಿವಿಗೊಡಬೇಡಿ ಎಂದು ರಮೇಶ್ ಜಾರಕಿಹೊಳಿ ಹೇಳಿದರು.


Spread the love

Leave a Reply

Your email address will not be published. Required fields are marked *