Posts Slider

Karnataka Voice

Latest Kannada News

ಸಚಿವ ಸ್ಥಾನಕ್ಕೆ ರಮೇಶ ಜಾರಕಿಹೊಳಿ ರಾಜೀನಾಮೆ….!?

Spread the love

ಬೆಂಗಳೂರು: ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ರಾಸಲೀಲೆ ಸಿಡಿಗೆ ಸಂಬಂಧಪಟ್ಟಂತೆ ಸಿಟ್ಟಾಗಿರುವ ಬಿಜೆಪಿ ಹೈಕಮಾಂಡ್‌ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.

ಪಂಚರಾಜ್ಯದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಗೆ ಮುಜುಗರ ಉಂಟಾಗುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ. ಈ ಕೂಡಲೇ ರಮೇಶ್‌ ಜಾರಕಿಹೊಳಿ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತ ಈಗಾಗಲೇ ಸಿಎಂ ಬಿಎಸ್‌ವೈ ಸೇರಿ ರಾಜ್ಯ ನಾಯಕರುಗಳಿಗೆ ಬಿಜೆಪಿಯಿಂದ ಆದೇಶ ಬಂದಿದ್ದು, ಇಂದು ರಾತ್ರಿ ಅಥಾವ ನಾಳೆ ಬೆಳಗ್ಗೆ ರಮೇಶ್ ಜಾರಕಿಹೊಳಿಯವರು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.

ಸಚಿವ ರಮೇಶ ಜಾರಕಿಹೊಳಿಯವರ ವೀಡಿಯೋ ಎನ್ನಲಾದ ಸಿಡಿಯನ್ನ ತೆಗೆದುಕೊಂಡು ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ರಮೇಶ ಕಲ್ಲಳ್ಳಿ, ಘಟನೆಗೆ ಸಂಬಂಧಿಸಿದ ಹಾಗೇ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರನ್ನ ಸಲ್ಲಿಸಿದ್ದಾರೆ.

ಇದಾದ ಕೆಲವೊತ್ತಿನಲ್ಲೇ ಬಿಜೆಪಿ ಹೈಕಮಾಂಡ್ ರಾಜ್ಯದ ಸಿಎಂ ಯಡಿಯೂರಪ್ಪ ಅವರಿಗೆ ಮಾತನಾಡಿ, ವಿವರಣೆ ಪಡೆದಿದ್ದು, ರಾಜೀನಾಮೆ ಪಡೆಯುವಂತೆ ಆದೇಶ ನೀಡಿದ್ದಾರೆಂದು ಹೇಳಲಾಗಿದೆ.


Spread the love

Leave a Reply

Your email address will not be published. Required fields are marked *