Posts Slider

Karnataka Voice

Latest Kannada News

ಅಲೆಮಾರಿಗಳ ಬದುಕಿಗೆ “ಉಸಿರಾಗುವ ಪ್ರಯತ್ನ”ಕ್ಕೆ ಕೈ ಹಾಕಿದ ರಜತ ಉಳ್ಳಾಗಡ್ಡಿಮಠ…

1 min read
Spread the love

ಹುಬ್ಬಳ್ಳಿ: ತಮ್ಮ ಹುಟ್ಟುಹಬ್ಬದ ದಿನದಿಂದ ಕೊರೋನಾ ವಾರಿಯರ್ ಗಳಿಗೆ ಸತ್ಕಾರ ಮಾಡುತ್ತಿರುವ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ, ಇಂದು ಗೊಂಬೆ ಕುಣಿತ ಕಲಾವಿದರಿಗೆ ಸನ್ಮಾನಿಸಿ ಉಡುಗೊರೆಗಳನ್ನ ನೀಡಿದರು.

ಮೂರುಸಾವಿರ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೊಂಬೆ ಕುಣಿತ, ಅಲೆಮಾರಿ ಜನಾಂಗದವರನ್ನ ಗುರುತಿಸಿ ಆಧರಿಸಿದರು.

ಈ ಸಮಯದಲ್ಲಿ ಮಾತನಾಡಿದ ರಜತ ಉಳ್ಳಾಗಡ್ಡಿಮಠ, ಸಾರ್ವಜನಿಕ ಬದುಕಿನಲ್ಲಿ ನಿಮ್ಮೇಲ್ಲರ ಸೇವೆಯನ್ನ ಸ್ಮರಿಸುವ ಸಮಯವಿದು. ಮುಂದಿನ ದಿನಗಳಲ್ಲಿಯೂ ನಿಮ್ಮ ಜೊತೆ ನಾನಿರುವುದಾಗಿ ಹೇಳಿದರು.

ಗೋಪನಕೊಪ್ಪದ ಅಲೆಮಾರಿ ಜಾನಪದ ಗೊಂಬೆ ಕುಣಿತ ಕಲಾವಿದರ ಸಂಘ ಮತ್ತು ಶ್ರೀ ಮಲ್ಲಿಕಾರ್ಜುನ ಅಲೆಮಾರಿ ದಾನ್ ಪಟಾ ಕಲಾವಿದರ ಸಂಘದ ಅಲೆಮಾರಿ ಗೊಂಬೆ ಕುಣಿತ ಕಲಾವಿದರಿಗೆ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಉಡುಗೊರೆಗಳನ್ನು ನೀಡಲಾಯಿತು.


Spread the love

Leave a Reply

Your email address will not be published. Required fields are marked *