ರಾಯಚೂರು: ನಡುಗಡ್ಡೆಯಲ್ಲಿ ಸಿಲುಕಿದ ಯುವಕರು- ಕಾರ್ಯಾಚರಣೆ ಹೇಗೆ ನಡೆದಿದೆ ಗೊತ್ತಾ..?
1 min readರಾಯಚೂರು: ನಿನ್ನೆ ಸಂಜೆಯಿಂದಲೂ ಸುರಿಯುತ್ತಿರುವ ಭಾರೀ ಮಳೆಯಿಂದ ಮಸ್ಕಿ ಹಳ್ಳ ಸಂಪೂರ್ಣವಾಗಿ ತುಂಬಿ ಹರಿಯುತ್ತಿದ್ದ, ನಡುಗಡ್ಡೆಯಲ್ಲಿ ಇಬ್ಬರು ಯುವಕರು ಸಿಲುಕಿಕೊಂಡಿದ್ದು, ಅವರನ್ನ ಹೊರಗೆ ತೆಗೆಯಲು ಹರಸಾಹಸ ಪಡೆಲಾಗುತ್ತಿದೆ.
ರಾಯಚೂರು ಜಿಲ್ಲೆಯ ಮಸ್ಕಿ ಹಳ್ಳದ ನಡುಗಡ್ಡೆಯಲ್ಲಿ ಚನ್ನಬಸವ ಮಸ್ಕಿ, ಜಲೀಲ್ ಮಸ್ಕಿ ಎಂಬ ಯುವಕರು ಸಿಲುಕಿಕೊಂಡಿದ್ದಾರೆ. ಯುವಕರು ಸಿಲುಕಿಕೊಂಡದ್ದನ್ನ ನೋಡಲು ಸಾವಿರಾರೂ ಜನ ಬಂದಿರುವುದರಿಂದ ಕಾರ್ಯಾಚರಣೆಗೆ ಮತ್ತಷ್ಟು ತೊಂದರೆಯಾಗುತ್ತಿದೆ.
ಮಸ್ಕಿ ಜಲಾಶಯದಿಂದ ಏಕಾಏಕಿ ನೀರು ಹರಿಬಿಟ್ಟಿದ್ದರಿಂದಲೂ ಮಸ್ಕಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇದನ್ನ ಗಮನಿಸಿದೇ ಹೊರಗಡೆ ಹೋಗಿದ್ದ ಯುವಕರಿಬ್ಬರು, ತಮ್ಮನ್ನ ಬದುಕಿಸಿ ಎಂದು ಜನರಲ್ಲಿ ಅಂಗಲಾಚುತ್ತಿದ್ದಾರೆ.
ಈಗಾಗಲೇ ಸ್ಥಳಕ್ಕೆ ಪೊಲೀಸರು ಬಂದಿದ್ದು, ಅಗ್ನಿಶಾಮಕ ದಳದವರನ್ನ ಕರೆಸಲಾಗುತ್ತಿದೆ. ಸ್ಥಳೀಯರು ಕೂಡಾ ಹಗ್ಗದ ಸಹಾಯದಿಂದ ಯುವಕರನ್ನ ಹೊರಗೆ ತರಲು ಪ್ರಯತ್ನ ನಡೆಸಿದ್ದಾರೆ.