ಹುಣಸೆಮರದ ಕೆಳಗೆ ಕೂತವರಿಗೆ ಸಿಡಿಲು- ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರ…!

ಗದಗ: ಧಾರಾಕಾರ ಮಳೆ ಸುರಿಯುತ್ತಿದ್ದ ಸಮಯದಲ್ಲಿ ಸಿಡಿಲು ಬಡಿದು ಮೂವರು ಸಾವನ್ನಪ್ಪಿ, ನಾಲ್ವರು ಗಾಯಗೊಂಡ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಹೊಲದಲ್ಲಿ ಕೆಲಸ ಮಾಡುವ ವೇಳೆಯಲ್ಲಿ ಈ ದುರ್ಘಟನೆ ನಡೆದಿದ್ದು, ಸಿಡಿಲಿನಿಂದ ಕುಮಾರ ಮಾದರ, ಶರಣಪ್ಪ ಅಡವಿ ಹಾಗೂ ಮಾರುತಿ ಗೋಶೆಲ್ಲನವರ ಮೃತಪಟ್ಟಿದ್ದಾರೆ.
ಮಳೆ ಬರುವ ವೇಳೆ ಹುಣಸಿ ಮರದ ಕೆಳಗೆ ಕುಳಿತಾಗ ಸಿಡಿಲು ಹೊಡೆದಿದೆ. ಗಾಯಗೊಂಡ ನಾಲ್ವರಲ್ಲಿ ಇಬ್ಬರು ಗದಗ ಜಿಲ್ಲಾಸ್ಪತ್ರೆ, ಇನ್ನಿಬ್ಬರು ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಕುಮಾರ್, ಮತ್ತು ಶರಣಪ್ಪ ಕಡಕೋಳ ಗ್ರಾಮದವರಾಗಿದ್ದು, ಮಾರುತಿ ಗೋಶೆಲ್ಲನವರ ಶಿರಹಟ್ಟಿ ಪಟ್ಟಣದ ನಿವಾಸಿಗಳಾಗಿದ್ದಾರೆ. ಶಿರಹಟ್ಟಿ ಸಿಪಿಐ ವಿಕಾಸ್ ಲಮಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶವಗಳನ್ನು ಶಿರಹಟ್ಟಿ ಆಸ್ಪತ್ರೆಗೆ ಸಾಗಿಸಿದ್ದಾರೆ.