ಸರಕಾರಿ ಶಾಲೆಯ “ನಲಿ-ಕಲಿ” ದಿಕ್ಕನ್ನೇ ಬದಲಿಸಿದ ಶಿಕ್ಷಕ…!

ರಾಯಚೂರು: ಸರಕಾರಿ ಶಾಲೆಗಳನ್ನ ಪ್ರೀತಿಸುವ ಮನಸ್ಸುಗಳು ಈ ಸುದ್ದಿಯನ್ನ ಪೂರ್ಣವಾಗಿ ನೋಡಲೇಬೇಕು. ಓರ್ವ ಶಿಕ್ಷಕ ತಾನು ಕೆಲಸ ಮಾಡುವ ಜಾಗದಲ್ಲಿ ಆತ್ಮ ಸಂತೃಪ್ತಿ ಕಂಡುಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ನಿಮ್ಮಲ್ಲಿದ್ದರೇ, ಇವರನ್ನ ನೋಡಿ ಕಲಿಯಬಹುದು.

ಇವರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ದಿಗ್ಗನಬಾವಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪರಮಾನಂದ. ಹೆಸರಿಗೆ ತಕ್ಕ ಹಾಗೇ ಇವರು ಪರಮಾನಂದರೇ. ಇವರು ಶಾಲೆಯ ಸ್ವರೂಪವನ್ನೇ ಬದಲಿ ಮಾಡಿದ್ದಾರೆ.
ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಯಿಂದ ದೂರವುಳಿದಿದ್ದು ನಿಮಗೆ ಗೊತ್ತೆಯಿದೆ. ಅದನ್ನ ಹೋಗಲಾಡಿಸಿ ಮುದೊಂದು ದಿನ ಮಕ್ಕಳು ಇದನ್ನೇಲ್ಲ ನೋಡಿ, ಶಾಲೆಗೆ ಓಡೋಡಿ ಬರಬೇಕೆಂಬ ಭಾವನೆ ಈ ಶಿಕ್ಷಕರದ್ದು.

ಹೊಸತನದಿಂದ ಕೂಡಿರುವ ಹಲವು ಬಗೆಯನ್ನ ಸುಂದರವಾಗಿ ಮಾಡಲು ಪರಮಾನಂದರ ಆಪ್ತರು, ಗ್ರಾಮದ ಹಲವರು ಧನ ಸಹಾಯ ಮಾಡಿದ್ದಾರೆ. ಆ ಹಣವನ್ನ ಅತ್ಯುತ್ತಮ ಕೆಲಸಕ್ಕೆ ಬಳಕೆಯಾಗಿದ್ದು ಈ ಶಿಕ್ಷಕರಿಂದ.
ಇದನ್ನೇಲ್ಲ ನೋಡಿ ನಿಮಗೆ ಖುಷಿಯಾಗಿ ಶಿಕ್ಷಕ ಪರಮಾನಂದರಿಗೆ ಅಭಿನಂದನೆ ಹೇಳಬೇಕೆನಿಸಿದರೇ 99007 04973 ಕಾಲ್ ಮಾತಾಡಿ. ವಿದ್ಯಾರ್ಥಿಗಳ ‘ಗುರು’ವಿಗೆ ಮತ್ತಷ್ಟು ಪ್ರೋತ್ಸಾಹಿಸಿ…