Posts Slider

Karnataka Voice

Latest Kannada News

ರಾಯಚೂರು-ಮಂತ್ರಾಲಯ ರಸ್ತೆಯಲ್ಲಿ ಅಪಘಾತ: ಓರ್ವ ಸಾವು-ಮತ್ತಿಬ್ಬರಿಗೆ ತೀವ್ರ ಗಾಯ

1 min read
Spread the love

ರಾಯಚೂರು: ಬೈಕ್ ಮತ್ತು ಆಟೋರಿಕ್ಷಾ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟು ಇಬ್ಬರು ತೀವ್ರ ಗಾಯಗೊಂಡ ಘಟನೆ ರಾಯಚೂರು- ಮಂತ್ರಾಲಯ ರಸ್ತೆಯಲ್ಲಿರುವ ಮಲಿಯಾಬಾದ್ ಕ್ರಾಸ್ ಬಳಿ ಸಂಭವಿಸಿದೆ.

ಆಟೋದಲ್ಲಿದ್ದ ದೇವನಪಲ್ಲಿ ಗ್ರಾಮದ ನಿವಾಸಿ ಅನೀಲ್ ಕುಮಾರ್ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಇನ್ನಿಬ್ಬರಿಗೂ ತೀವ್ರ ಥರದ ಗಾಯಗಳಾಗಿವೆ. ಅಪಘಾತದ ರಭಸಕ್ಕೆ ಆಟೋ ಸಂಪೂರ್ಣವಾಗಿ ಜಖಂಗೊಂಡು ಪಲ್ಟಿಯಾಗಿದೆ.

ಬೈಕಿನಲ್ಲಿದ್ದವರ ಕಾಲುಗಳಿಗೆ ಗಾಯವಾಗಿದ್ದು, ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಯರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *