Posts Slider

Karnataka Voice

Latest Kannada News

ಬಿಇಓ ಮಂಜುಳಾ ಅಮಾನತ್ತು: ಫುಲೆ ಶಿಕ್ಷಕರ ಸಂಘ ಖಂಡನೆ…!

Spread the love

ಧಾರವಾಡ: ಉಡುಪಿಯ ಕ್ಷೇತ್ರ ಶಿಕ್ಷಣಾಧಿಕಾರಿಯನ್ನ ಅಮಾನತ್ತು ಮಾಡಿರುವುದರ ಹಿಂದೆ ಕಾಣದ ಕೈಗಳ ಕೈವಾಡ ಇರಬಹುದೆಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘ ಆತಂಕ ವ್ಯಕ್ತಪಡಿಸಿದೆ.

ಉಡುಪಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಭ್ರಷ್ಟಾಚಾರ ವಿರುದ್ಧ ಧ್ವನಿಯೆತ್ತಿದ ಪ್ರಾಮಾಣಿಕ ಹಾಗೂ ದಕ್ಷ ಆಡಳಿತಗಾರೆಂದು ಅನೇಕರ ಅಭಿಪ್ರಾಯ ಕೇಳಿಬಂದಿದ್ದ  ಮಹಿಳಾ ಕ್ಷೇತ್ರ ಶಿಕ್ಷಣಾಧಿಕಾರಿಗ ಕೆ. ಮಂಜುಳ ಅವರನ್ನು ಏಕಾಏಕಿ ಅಮಾನತು ಮಾಡಿರುವುದು ಸರಿಯಲ್ಲ. ಸತ್ಯಾಸತ್ಯತೆ ಅರಿತು ಹಿಂದೆ ಇರುವಂತ ಕಾಣದ ಕೈಗಳ ಕೈವಾಡ ದ ಬಗ್ಗೆ  ಸಂಪೂರ್ಣ ಮಾಹಿತಿ ತಿಳಿಯಬೇಕೆಂದು ಆಗ್ರಹಿಸಿದ್ದಾರೆ.

ಬಿಇಓ ಕೆ.ಮಂಜುಳಾ ಅವರ ಜೊತೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘ ಸದಾಕಾಲ ಇರುತ್ತದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷೆ ಡಾ. ಲತಾ. ಎಸ್. ಮುಳ್ಳೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಜ್ಯೋತಿ. H ಹೇಳಿದ್ದಾರೆ.

ಪ್ರಾಮಾಣಿಕ ಅಧಿಕಾರಿಯ ಹಿಂದೆ ನಡೆದಿರುವ ಷಢ್ಯಂತ್ರದ ಬಗ್ಗೆಯೂ ತನಿಖೆಯನ್ನ ಮಾಡಬೇಕಾಗಿದೆ ಎಂಬುದು ಸಂಘದ ಮನವಿಯಾಗಿದೆ.


Spread the love

Leave a Reply

Your email address will not be published. Required fields are marked *