ಗುಡಗೇರಿ ಪಿಎಸ್ಐ ಸವಿತಾ ಮೇಡಂ.. ನಿಮ್ಮ ಕಥೆ ಏನು… ಈ ಮೂವರು ಸತ್ತರೆ ಹೊಣೆ ಯಾರೂ…!?

ಹುಬ್ಬಳ್ಳಿ: ಪೊಲೀಸ್ ಠಾಣೆಗೆ ಹೋಗಿ ದೂರು ತೆಗೆದುಕೊಂಡು ನಮ್ಮನ್ನ ರಕ್ಷಿಸಿ ಎಂದು ಕೇಳಿದವರ ಮೇಲೆನೇ ಕೈಲಾಗುವವರ ಮಾತು ಕೇಳಿ ಪ್ರಕರಣ ದಾಖಲು ಮಾಡಿದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮದಲ್ಲಿ ನಡೆದಿದೆ.
ಸಿದ್ಧಪ್ಪ ಕಳಸಣ್ಣನವರ ಎಂಬ ವ್ಯಕ್ತಿ ತರ್ಲಘಟ್ಟ ಗ್ರಾಮದ ಪಂಚಾಯತಿಯಲ್ಲಿ ನಡೆದ ಅವ್ಯವಹಾರವನ್ನ ಬಯಲಿಗೆ ತಂದಿದ್ದೆ ಇದೇಲ್ಲವಕ್ಕೂ ಕಾರಣವಾಗಿದೆ ಎಂದು ಹೇಳಲಾಗಿದೆ. ಹೀಗಾಗಿಯೇ, ಸಿದ್ಧಪ್ಪ ತನ್ನ ಕುಟುಂಬದೊಂದಿಗೆ ಕೂತು, ವೀಡಿಯೋ ಮಾಡಿ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ್ದಾನೆ.
ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ..
ತರ್ಲಘಟ್ಟ ಗ್ರಾಮದ ಬಡವರ ಕೂಗನ್ನ ಕೇಳದೇ ಗುಡಗೇರಿ ಪಿಎಸ್ಐ ಸವಿತಾ ಅವರು, ಅನ್ಯಾಯ ಮಾಡಿದ್ದಾರೆಂದು ಸಿದ್ಧಪ್ಪನ ಮಡದಿ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ನ್ಯಾಯವನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಒದಗಿಸಬೇಕಿದೆ.