Posts Slider

Karnataka Voice

Latest Kannada News

ಕಳ್ಳರಿಂದ ಭೀಕರವಾಗಿ ಹತ್ಯೆಯಾದ ಪಿಎಸ್ಐ…!

1 min read
Spread the love

ಹುಬ್ಬಳ್ಳಿಯಲ್ಲಿ ನಡೆದ ಅನಾಹುತಕಾರಿ ಪ್ರಕರಣವೊಂದನ್ನ ಕೆಲವೇ ನಿಮಿಷಗಳಲ್ಲಿ ನಿರೀಕ್ಷಿಸಿ..

ತಿರುಚಿ: ಕುರಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳನ್ನ ಬೆನ್ನು ಹತ್ತಿದ್ದ ಪಿಎಸ್ಐವೊಬ್ಬರನ್ನ ಕುರಿ ಕಳ್ಳರು ಕೊಡಲಿಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ತಿರುಚಿಯ ಪುದಕೇಡಿಯ ಕೇರ್ನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಿಎಸ್ಐ ಭೂಮಿನಾಥನ್ ಎಂಬುವವರೇ ಹತ್ಯೆಯಾಗಿದ್ದು, ಬೈಕಿನಲ್ಲಿ ಕಳ್ಳರನ್ನ ಬೆನ್ನು ಹತ್ತಿದ ಸಮಯದಲ್ಲಿಯೇ ಕೊಡಲಿಯಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ.

ಸುಮಾರು ಹೊತ್ತಿನ ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪಿಎಸ್ಐ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವನ್ನ ಕೇರ್ನೂರ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಈ ಭಾಗದಲ್ಲಿ ನಿರಂತರವಾಗಿ ಕುರಿಗಳ  ಕಳ್ಳತನ ನಡೆಯುತ್ತಿದ್ದರಿಂದ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಅದೇ ಕಾರಣಕ್ಕೆ ಪಿಎಸ್ಐ ಹತ್ಯೆಯಾಗಿರುವುದೆಂದು ಗೊತ್ತಾಗಿದೆ.


Spread the love

Leave a Reply

Your email address will not be published. Required fields are marked *

You may have missed