ನವಲಗುಂದ ಪಿಎಸೈ ಜಯಪಾಲ ಪಾಟೀಲ ವರ್ಗಾವಣೆ…!

ಬೆಳಗಾವಿ: ಉತ್ತರ ವಲಯ ಆರಕ್ಷಕ ಮಹಾನಿರೀಕ್ಷಕರು 16 ಪಿಎಸ್ಐಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ನವಲಗುಂದ ಠಾಣೆಯ ಜಯಪಾಲ ಪಾಟೀಲ ಅವರನ್ನ ಧಾರವಾಡದ ಡಿಎಸ್ ಬಿ ಘಟಕಕ್ಕೆ ವರ್ಗಾವಣೆ ಮಾಡಿದ್ದಾರೆ.

ಜಯಪಾಲ ಪಾಟೀಲ ಅವರ ವರ್ಗಾವಣೆಯಾದ ಜಾಗಕ್ಕೆ ಬಾಗಲಕೋಟೆಯ ನವನಗರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಲ್ಮೇಶ ಬೆನ್ನೂರ ಅವರನ್ನ ವರ್ಗಾವಣೆ ಮಾಡಲಾಗಿದೆ.
2017ರ ಬ್ಯಾಚಿನ ಪಿಎಸ್ಐ ಕಲ್ಮೇಶ ಬೆನ್ನೂರ ಅವರು ಹಲವು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಉತ್ತಮ ಅಧಿಕಾರಿಯಾಗಿ ಹೆಸರು ಮಾಡಿದ್ದಾರೆ. ಕಠಿಣ ಸಮಯದಲ್ಲೂ ಕರ್ತವ್ಯ ನಿರ್ವಹಿಸಿದ್ದರಿಂದ ಹಿರಿಯ ಅಧಿಕಾರಿಗಳು ಬೆನ್ನೂರ ಅವರನ್ನ ಹಲವು ಬಾರಿ ಪ್ರಶಂಸಿದ್ದಾರೆ.

ಇನ್ನುಳಿದಂತೆ ಚಿಕ್ಕೋಡಿ ಠಾಣೆಯ ರಾಕೇಶ ಬಗಲಿ ಅವರನ್ನ ಚಿಕ್ಕೋಡಿಯ ಹೆಸ್ಕಾಂ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಶರಣೇಶ ಜಾಲಿಹಾಳ ಅವರನ್ನ ಡಿಸಿಆರ್ ಬಿ ಬೆಳಗಾವಿಯಿಂದ ಖಾನಾಪುರ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ.