ಹಳೇಹುಬ್ಬಳ್ಳಿ ಠಾಣೆಯ ಗೌರವ ಹೆಚ್ಚಿಸಿದ “PSI ಶಿವು”- ಹೆಡಮುರಿಗೆ ಕಟ್ಟಿದ್ದು ಯಾರನ್ನ ಗೊತ್ತಾ…!!??
1 min readಹುಬ್ಬಳ್ಳಿ: ಓರ್ವ ಅಧಿಕಾರಿ ದಕ್ಷತೆಯನ್ನ ಮೈಗೂಡಿಸಿಕೊಂಡಿದ್ದರೇ, ಸಮಾಜಕ್ಕೆ ಉತ್ತಮರಾಗಿ ಕಾರ್ಯನಿರ್ವಹಿಸುವುದು ಖಚಿತ. ಅಂತಹ ಅಧಿಕಾರಿಯೋರ್ವರು ಇಡೀ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಗೌರವವನ್ನ ಹೆಚ್ಚಿಸುವಂತ ಕಾರ್ಯಾಚರಣೆ ನಡೆಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗಂಗಿವಾಳ ಗ್ರಾಪಂ ಸದಸ್ಯ ದೀಪಕ ಪಟದಾರಿಯ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದರು. ಅಷ್ಟೇ ಅಲ್ಲ, ಈ ಪ್ರಕರಣದಿಂದ ಹಳೇಹುಬ್ಬಳ್ಳಿಯ ಹಲವು ಪೊಲೀಸರಿಗೂ ಇರುಸು ಮುರುಸು ಉಂಟಾಗಿತ್ತು. ಇದನ್ನೇಲ್ಲ ಮರೆಸುವಂತಹ ಕೆಲಸವನ್ನ ಪಿಎಸ್ಐ ಶಿವಾನಂದ ಬನ್ನಿಕೊಪ್ಪ ಮಾಡಿ ಮುಗಿಸಿದ್ದಾರೆ.
ಪಟದಾರಿ ಹತ್ಯೆ ಪ್ರಕರಣ ಸಿಓಡಿಗೆ ವರ್ಗಾವಣೆಯಾದರೂ ಖಚಿತ ಮಾಹಿತಿಯನ್ನ ಆಧರಿಸಿ ಜಮಖಂಡಿಯಲ್ಲಿ ರುದ್ರಪ್ಪ ಮತ್ತು ಯಲ್ಲಪ್ಪ ಮೇಟಿಯನ್ನ ಹಿಡಿದು ತಂದು, ಸಿಓಡಿಗೆ ಒಪ್ಪಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನ್ಯಾಯದ ಪರ ನಿಲ್ಲುವ ಅಧಿಕಾರಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಪಿಎಸ್ಐ ಶಿವಾನಂದ ಥರದವರು ಉತ್ತಮವರಿಗೆ ಉದಾಹರಣೆಯಾಗಿ ನಿಲ್ಲುತ್ತಾರೆ.