ಇದು ನಿಜವಾದ ಪೊಲೀಸರ ಗಾಂಧಿಗಿರಿ…!

ಹುಬ್ಬಳ್ಳಿ: ಯಾವುದೇ ಕರ್ತವ್ಯ ನಿರ್ವಹಿಸಲಿ ಅಲ್ಲೊಂದು ಮಾನವೀಯತೆ ಇರುವುದು ಮುಖ್ಯ. ಅದರಲ್ಲಿಯೇ ಪೊಲೀಸರು ಎಂದರೇ, ಬೇರೆಯದ್ದೆ ವಿಷಯ ಬಿಡಿ. ಅವರನ್ನ ಅನೇಕರು ನೋಡುವ ದೃಷ್ಠಿಕೋನವೇ ಬೇರೆ. ಆದರೆ, ಹುಬ್ಬಳ್ಳಿಯಲ್ಲಿಯೂ ಪೊಲೀಸರ ಗಾಂಧಿಗಿರಿ ನಿರಂತರವಾಗಿ ನಡೆಯುತ್ತಲೆ ಇರುತ್ತದೆ. ಆದರೆ, ಅದು ಕಂಡು ಬರುವುದಿಲ್ಲವಷ್ಟೇ.
ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ಮಳೆಯಲ್ಲಿ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನ ಹುಬ್ಬಳ್ಳಿಯ ಪೂರ್ವ ಸಂಚಾರಿ ಠಾಣೆಯ ಪಿಎಸ್ಐ ಶರಣ ದೇಸಾಯಿ, ಸಿಬ್ಬಂದಿಗಳಾದ ಸೋಮಶೇಖರ ಮೇತ್ರಿ, ಮಲ್ಲಿಕಾರ್ಜುನ ಶಿರೆನ್ನವರ, ಚೆನ್ನಪ್ಪಗೌಡ್ರ, ಶಂಭು ಎಲ್ಲರೂ ಸೇರಿಕೊಂಡು ಆಟೋದಲ್ಲಿ ಹತ್ತಿಸಿ, ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಿದರು.
ಸಾರ್ವಜನಿಕವಾಗಿ ಬಿದ್ದು ಕೆಸರಿನಲ್ಲಿಯೇ ಹೊರಳಾಡುತ್ತಿದ್ದ ವ್ಯಕ್ತಿಯನ್ನ ನೋಡಿಯೂ ನೋಡದಂತೆ ಹೋಗುತ್ತಿದ್ದ ಸಾರ್ವಜನಿಕರ ನಡುವೆ, ಪೊಲೀಸರು ಮಾನವೀಯತೆ ಮೆರೆದಿದ್ದು, ಎಲ್ಲರಲ್ಲೂ ಖುಷಿಯನ್ನ ಮೂಡಿಸಿತು.
ಪೊಲೀಸರಲ್ಲಿ ಮಾನವೀಯತೆ ಹೆಚ್ಚಿದೆ. ಕೆಲವು ಎಲ್ಲ ಕಡೆಯೂ ಹುಳುಗಳು ಇರುತ್ತವೆ ಇರುತ್ತವೆ ಹೊರತಾಗಿ, ಇದ್ದವುಗಳೆಲ್ಲವೂ ಹುಳುಗಳೇ ಅಲ್ಲ ಎಂಬುದು ಪೊಲೀಸರನ್ನ ಮೂದಲಿಸುವವರು ತಿಳಿದುಕೊಳ್ಳಬೇಕಿದೆ.
ಪ್ರತಿದಿನ ಸಾರ್ವಜನಿಕರಿಗೆ ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುವ ಪೊಲೀಸರು ನಮ್ಮ ನಿಮ್ಮ ನಡುವೆ ಇದ್ದಾರೆ. ಅವರು ಪ್ರಚಾರ ಪಡೆಯುವುದಿಲ್ಲ. ಪಿಎಸ್ಐ ಶರಣ ದೇಸಾಯಿಯವರ ತಂಡ ಮಾಡಿದ ಇಂದಿನ ಕೆಲಸ ಎಲ್ಲರೂ ಮೆಚ್ಚುವಂತಹದು.