ಮಟನ್ ಮಾರ್ಕೆಟ್ ಪ್ರತಿಭಟನೆ- ತೀಕ್ಷ್ಣವಾಗಿ ಉತ್ತರ ನೀಡಿ, ಅಶಾಂತಿ ಬೇಡ ಎಂದ ಇಸ್ಮಾಯಿಲ್ ತಮಾಟಗಾರ…!!!
ಧಾರವಾಡ: ಕಳೆದ ಎರಡು ದಿನಗಳ ಹಿಂದೆ ಧಾರವಾಡದ ಶಿವಾಜಿ ವೃತ್ತದ ಬಳಿಯಿರುವ ಕಸಾಯಿಖಾನೆ ಬಳಿ ಹಿಂದು ಸಂಘಟನೆ ನಡೆಸಿದ್ದ ಪ್ರತಿಭಟನೆಯ ನಂತರ ಸ್ಥಳಕ್ಕೆ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಭೇಟಿ ನೀಡಿ, ಸ್ಥಳೀಕರೊಂದಿಗೆ ಮಾತನಾಡಿದರು.
ಈ ಸಮಯದಲ್ಲಿ ಮಾತನಾಡಿದ ಇಸ್ಮಾಯಿಲ್ ತಮಾಟಗಾರ ಅವರು, ಧಾರವಾಡನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಏಕೆ ಎಂಬುದು ತಿಳಿಯುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು.
ಮಟನ್ ಮಾರ್ಕೆಟ್ ಸ್ಥಳಾಂತರ ಮಾಡಲು ಯಾರೂ ವಿರೋಧಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳು ಮೊದಲು ಅದನ್ನ ಮಾಡಬೇಕು ಎಂದು ಸಲಹೆ ನೀಡಿದರು.
